
ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಕೆಲವೊಂದು ಅವಘಡಗಳು ಉಂಟಾಗುತ್ತಿವೆ.

ತಣ್ಣೀರುಪಂತ ಗ್ರಾಮದ ಪಾಲೇದು ಎಂಬಲ್ಲಿ ಮಹಮ್ಮದ್ ಇಕ್ಬಾಲ್ ಎಂಬವರ ಕುಡಿಯುವ ನೀರಿನ ಬಾವಿಯ ತಡೆಗೋಡೆ ಕುಸಿದ ಘಟನೆ ಜು. 19 ರಂದು ನಡೆದಿದೆ. ಕುಡಿಯುವ ನೀರಿಗೆ ಆಧಾರವಾಗಿದ್ದ ಈ ಬಾವಿಯೊಳಗೆ ಹಾಕಲಾಗಿದ್ದ ಪಂಪ್ ಗೆ ಹಾನಿಯಾಗಿದೆ. ಬಾವಿಯ ನೀರು ಕೆಸರುಮಯಗೊಂಡಿದೆ.















