ಬೆಳ್ತಂಗಡಿ: ಆತೂರು ಎಪಿ ಆದಮ್ ಮದನಿಯವರ ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರು ಹಾಗೂ ಸುನ್ನಿ ಸಂಘ ಕುಟುಂಬಗಳ ಅಜೇಯ ನಾಯಕರಾದ ಅಲ್ ಹಾಜ್ ಪಿ.ಕೆ. ಮುಹಮ್ಮದ್ ಮದನಿ ಆಳಕ್ಕೆ ಅವರ ಸಮಾಜಮುಖಿ ಸೇವೆ, ಧಾರ್ಮಿಕ ಕ್ಷೇತ್ರದ ಕೊಡುಗೆ ಮತ್ತು ನಾಯಕತ್ವವನ್ನು ಗುರುತಿಸಿ ಎಸ್.ಎಮ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಸಮಾಜದ ಏಳಿಗೆ, ಧಾರ್ಮಿಕ ಶಿಕ್ಷಣದ ಪ್ರಗತಿ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಮೂಲ್ಯ ಸೇವೆಗಳು ಎಲ್ಲರಿಗೂ ಮಾದರಿಯಾಗಿವೆ.
ವೇದಿಕೆಯಲ್ಲಿ ಎಸ್.ಎಮ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಎಸ್.ಎಮ್ ಅಬ್ದುರಹ್ಮಾನ್ ಮದನಿ ಜಾರಿಗೆಬೈಲ್, ಕೊಳಕೆ ಮುದರ್ರಿಸ್ ಸಾಲಿಮ್ ಸಅದಿ ಅಲ್ ಅಫ್ಲಾಲಿ ತುರ್ಕಳಿಕೆ, ಮಜೂರು ಅಬೂಬಕ್ಕರ್ ಸಅದಿ, ಮರ್ದಾಳ ಜುಮ್ಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಸಅದಿ, ಅಬ್ದುರಹ್ಮಾನ್ ಮದನಿ ಬೆಳ್ತಂಗಡಿ, ಅಬೂಬಕ್ಕರ್ ಹಿಮಮಿ ಕುಪ್ಪೆಟ್ಟಿ, ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಶಾಫಿ ಸಖಾಫಿ ಪಟ್ಟೂರು, ಅಬ್ದುಲ್ ಅಝೀಝ್ ಮದನಿ ಹಾಗೂ ಎಸ್.ಎಮ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.












