
ಅಳದಂಗಡಿ: ಕುದ್ಯಾಡಿ ಶಾಲೆಯ ಹಳೆ ವಿದ್ಯಾರ್ಥಿ ಪ್ರಸ್ತುತ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿರುವ ಸಚಿನ್ ಉಮನೊಟ್ಟು ಇವರು ತಾನು ಕಲಿತ ಶಾಲೆಯ ಎಲ್ಲಾ ಮಕ್ಕಳಿಗೆ ಶಾಲಾ ಬ್ಯಾಗ್ ನ್ನು ಕೊಡುಗೆಯಾಗಿ ನೀಡಿದ್ದಾರೆ.


ಸಚಿನ್ ಅವರ ತಂದೆ ಶ್ರೀಧರ ಪೂಜಾರಿ (ಮಾಜಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು) ಇವರು ಜೂ.8ರಂದು ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಅದೇ ರೀತಿ ಶಾಲೆಯ ಎಲ್ಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರವನ್ನು ಕೋಟಿ ಚೆನ್ನಯ ಕ್ರಿಕೆಟರ್ಸ್ , ಹಾಗೆಯೇ ಛತ್ರಿಯನ್ನು ಶ್ರೀಮತಿ ಶಮಿತಾ ರವಿಪೂಜರಿ ಅಲೆಕ್ಕಿ, ಸಿಹಿತಿಂಡಿಯನ್ನು ಶ್ರೀಮತಿ ಪೂರ್ಣಿಮಾ ಪ್ರಶಾಂತ್ ಕೊಡಿಬಳೆ, ಪ್ರಕಾಶ್ ಕಬ್ಲದಡ್ಡ ನೀಡಿದ್ದಾರೆ.












