ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಳು ಕೊಡಪಟ್ಯ ಪರಿಸರದ ಕೃಷಿ ತೋಟಗಳಿಗೆ ಕಾಡಾನೆ ಪ್ರವೇಶಿಸಿ ಕೃಷಿಗಳನ್ನು ನಾಶ ಮಾಡಿದ ಘಟನೆ ಜೂ.8 ರಂದು ರಾತ್ರಿ 1.30 ಸುಮಾರಿಗೆ ನಡೆದಿದೆ.


ಕೊಡಪಟ್ಯದ ಬಾಬು ಗೌಡರಿಗೆ ಸಂಬಂಧ ಪಟ್ಟಂತಹ ಕೃಷಿ ತೋಟಗಳಿಗೆ ನುಗ್ಗಿ ಅಡಿಕೆ ಮರ, ತೆಂಗಿನ ಗಿಡ, ಬಾಳೆಗಿಡಗಳನ್ನು ಪುಡಿ ಮಾಡಿ, ಸಮೀಪದ ವಿಶ್ವನಾಥ ಶೆಟ್ಟಿಯವರ ಕೃಷಿ ತೋಟಗಳಿಗೆ ಪ್ರವೇಶಿಸಿ ಬಳಿಕ ಶೆಟ್ಟಿಪಾಳು ಕಡೆಗೆ ಸಂಚಾರವನ್ನು ನಡೆಸಿದೆ ಎನ್ನಲಾಗಿದೆ.












