ಕೊಕ್ಕಡ: ಇಲ್ಲಿಯ ಪೂವಾಜೆ ನಿವಾಸಿ ರುಕ್ಮಯ್ಯ ಗೌಡ(88ವ) ರವರು ಅಸೌಖ್ಯದಿಂದ ಇಂದು (ಜೂ.9)ನಿಧನರಾಗಿದ್ದಾರೆ.
ಇವರು ಕೃಷಿಕರಾಗಿದ್ದು ಇತ್ತೀಚೆಗೆ ಸಹಕಾರಿ ಸಂಘದಿಂದ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು. ಸುಮಾರು 45 ವರ್ಷಗಳ ಮೇಲೂ ಮಾಸ್ತಿಕಲ್ಲು ಮಜಲು ಗ್ರಾಮ ದೈವಗಳ ನೇಮೋತ್ಸವದಂದು ದೈವಗಳ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಇವರ ಈ ಸೇವೆಗೆ ಕಳೆದ ವರ್ಷ ಸೇವಾ ಟ್ರಸ್ಟ್ ವತಿಯಿಂದ ಗ್ರಾಮಸ್ಥರು ಸೇರಿ ಸನ್ಮಾನಿಸಿರುತ್ತಾರೆ.
ಮೃತರು ಪತ್ನಿ ಚಂದ್ರಾವತಿ, ಮೂವರು ಪುತ್ರರಾದ ಹೊನ್ನಪ್ಪ ಗೌಡ, ತಿಮ್ಮಪ್ಪ ಗೌಡ, ಧರ್ಮಸ್ಥಳ ಮೆಸ್ಕಾಂ ಉದ್ಯೋಗಿ ರಮೇಶ್ ಗೌಡ, ಪುತ್ರಿಯರಾದ ಲಲಿತಾ, ಯಮುನಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.












