July 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಂದ ಅತ್ಯುನ್ನತ ಸಾಧನೆ : ಕಾಲೇಜಿಗೆ ಹೆಮ್ಮೆ ತಂದ ಫಲಿತಾಂಶ

ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟವಾದ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿ ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ಸಮರ್ಪಿತ ಮಾರ್ಗದರ್ಶನ ಹಾಗೂ ಕಾಲೇಜಿನ ಗುಣಮಟ್ಟದ ಶಿಕ್ಷಣದ ಫಲವಾಗಿ ಹಲವು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಥಮ ಬಿ.ಫಾರ್ಮ್ ಪ್ರಥಮ ಸೆಮಿಸ್ಟರ್ನಲ್ಲಿ ಆಯೇಶತ್ ರಫಿಯಾ (92.2%) ಪ್ರಥಮ, ಸುದೀಕ್ಷಾ ಕೆ.ಎಸ್. (89.6%) ದ್ವಿತೀಯ ಹಾಗೂ ಟಿ. ಆಯಿಶತ್ ರಫಿಹಾ (88.9%) ತೃತೀಯ ಸ್ಥಾನ ಪಡೆದಿದ್ದಾರೆ. ಅನನ್ಯಾ (85.2%), ಫಾತಿಮಾ ಜುಬೈರಾ ಕೆ. (83.0%), ಫಾತಿಮತ್ ಮೌಜ್ರಾ (86.7%) ಹಾಗೂ ಫಾತಿಮತ್ ಥಾಸ್ಲಿಯಾ (81.9%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಬಿ.ಫಾರ್ಮ್ ತೃತೀಯ ಸೆಮಿಸ್ಟರ್ನಲ್ಲಿ ಕೀರ್ತಿ ಪಿ. (89.2%) ಪ್ರಥಮ, ತೃಪ್ತಿ (84.2%) ದ್ವಿತೀಯ ಹಾಗೂ ಅಂಜಲಿ ಕೆ. ಮತ್ತು ಭಾಗ್ಯಶ್ರೀ (ತಲಾ 81.7%) ತೃತೀಯ ಸ್ಥಾನ ಗಳಿಸಿದ್ದಾರೆ. ಫಾತಿಮತುಲ್ ಮಿಸ್ರಿಯಾ (78.3%), ನಫೀಸತ್ ಸಾಜಿದಾ ಕೆ.ಎಚ್. (77.5%), ನಿಹಾಲಾ (77.5%), ಪವಿತ್ರ ಸಂಗಪ್ಪ ಬಾರಕರ್ (78.3%), ಪ್ರಿಯಾಂಕಾ ಎಂ. (76.7%), ಸ್ಮಿತನ್ ಬಿ.ಆರ್. (79.2%) ಹಾಗೂ ಝೈನಬಾ ಝೈಮಾ (75.8%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತೃತೀಯ ಬಿ.ಫಾರ್ಮ್ ಪಂಚಮ ಸೆಮಿಸ್ಟರ್ನಲ್ಲಿ ಪ್ರಿಯಾ (86.2%) ಪ್ರಥಮ, ಖತೀಜತುಲ್ ಮುನಜ್ಜಹಾ (83.1%) ದ್ವಿತೀಯ ಹಾಗೂ ಶರಣ್ಯ ಎಸ್. (81.5%) ತೃತೀಯ ಸ್ಥಾನ ಪಡೆದಿದ್ದಾರೆ. ಪತ್ರಾ ಶುಮಿತಾ ನಿಖಿಲ್ (79.2%), ರೂಪೇಶ್ (77.7%), ಸಯ್ಯದ್ ಅನ್ವರ್ (76.9%) ಹಾಗೂ ವಿದ್ಯಾ ಎಸ್. (78.5%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಚತುರ್ಥ ಬಿ.ಫಾರ್ಮ್ ಸಪ್ತಮ ಸೆಮಿಸ್ಟರ್ನಲ್ಲಿ ಸಲ್ಮಾ ಬಾನು ಮೊಹಮ್ಮದ್ ಜಾವೇದ್ (90.8%) ಪ್ರಥಮ, ಅಮೃತಾ ಕೆ. (90.0%) ದ್ವಿತೀಯ ಹಾಗೂ ಧನ್ಯಶ್ರೀ ಎನ್. (88.3%) ತೃತೀಯ ಸ್ಥಾನ ಪಡೆದಿದ್ದಾರೆ. ಅಲನ್ ಜೋಸೆಫ್ (84.2%), ಅಮಿನತುಲ್ ರಿಮ್ಶಾ (85.0%), ಆಶಿತಾ (80.0%), ಆಯೇಶಾ ಝೋಹಾ (81.7%), ಭಾನುನಂದನಾ ಜಿ.ಎಸ್. (85.8%), ಚಂದನಾ ಎಸ್. (83.3%), ದೀಕ್ಷಾ ಹೆಚ್.ಕೆ. (83.3%), ಫಾತಿಮತ್ ಸಯೀದಾ (85.0%), ಫಾತಿಮತ್ ಶಬೀಬಾ (86.7%), ಫಾತಿಮತ್ ಸಮ್ಸೀನಾ (87.5%), ಜನನಿ ಎನ್.ಪಿ. (82.5%), ಜಯಶ್ರೀ ಬಿ. (84.2%), ಕಿರಣ್ ಎಸ್. (80.8%), ಲೋಹಿತ್ ಸಿ. (80.8%), ಮೇಘಾಬಾಯಿ ಪಿ.ಎಂ. (85.8%), ರೇಣುಕಾ (80.8%), ರಿಫಾ ಆಯಿಷಾ (80.8%), ಶಶ್ವತ್ ಎನ್.ಪಿ. (82.5%) ಹಾಗೂ ಸುಷ್ಮಿತಾ (81.7%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಹರ್ಷ ವ್ಯಕ್ತಪಡಿಸಿದ್ದು, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

ಟೀಂ ಅಭಯಹಸ್ತ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ| ಡಿ. ಹೆಗ್ಗಡೆಯವರ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್ ಮಹತ್ವದ ತೀರ್ಪು

Suddi Udaya

ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ ಜಗದೀಶ್ಚಂದ್ರ ಡಿ ಕೆ ಆಯ್ಕೆ

Suddi Udaya

ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಬಿಹಾರದ ಆರೋಪಿಯನ್ನು ಹೆಡೆಮುರಿ ಕಟ್ಟಿದ ವೇಣೂರು ಪೊಲೀಸರು

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಚಾಲನೆ

Suddi Udaya
error: Content is protected !!