ಬೆಳ್ತಂಗಡಿ : ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ, ಬೆಳ್ತಂಗಡಿ ಇದರ 44ನೇ ವರ್ಷದ ಮಹಾಸಭೆಯು ಇತ್ತೀಚೆಗೆ ಜರುಗಿತು. ಸಭೆಯಲ್ಲಿ 2026-27ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಆನಂದ ದೇವಾಡಿಗ ನಿವೃತ್ತ ಮೆಸ್ಕಾಂ, ಕಾರ್ಯದರ್ಶಿಯಾಗಿ ವೆಂಕಟರಮಣ ಆಚಾರ್ ನಿವೃತ್ತ ಮೆಸ್ಕಾಂ, ಕೋಶಾಧಿಕಾರಿಯಾಗಿ ಅನಂತಕೃಷ್ಣ ಹಳೆಕೋಟೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎಂ ಡಿ ಸಂಜೀವ, ಜೊತೆ ಕಾರ್ಯದರ್ಶಿಯಾಗಿ ಸದಾಶಿವ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ವಿಜಯಕುಮಾರ್, ಪದ್ಮ ಕುಮಾರ್ ಎಚ್, ಗಣೇಶ, ಯೋಗೇಶ್ ಕೆ, ಶ್ರೀ ಹರಿದಾಸ್ ಕೆ. , ಸಲಹೆಗಾರರಾಗಿ ಶ್ರೀಧರ ಶೆಟ್ಟಿ ಪೊಸಲಾಯಿ ಹಾಗೂ ಆನಂದ ಹೆಗ್ಡೆ, ಪ್ರಧಾನ ಸಂಚಾಲಕರಾಗಿ ಡಾ. ಕೆ.ಜಿ ಪಣಿಕ್ಕರ್, ಸಂಚಾಲಕರುಗಳಾಗಿ ಆನಂದ ಶೆಟ್ಟಿ ಐಸಿರಿ, ಗಣೇಶ್ ಐತಾಳ್, ಅನಂತಕೃಷ್ಣ, ಸುರೇಶ್ ಶೆಟ್ಟಿ ಲಾಯಿಲ, ಉದಯಕುಮಾರ್ ಲಾಯಿಲ ಇವರುಗಳನ್ನು ಆಯ್ಕೆ ಮಾಡಲಾಯಿತು.
ಅನಂತ ಕೃಷ್ಣ ಸ್ವಾಗತಿಸಿ ಕಳೆದ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ಎಂ. ಡಿ ಸಂಜೀವ ಧನ್ಯವಾದವಿತ್ತರು.













