June 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಮಹಾಶಕ್ತಿ ಕೇಂದ್ರ ಹಾಗೂ ಯುವಮೋರ್ಚಾ ಬೆಳ್ತಂಗಡಿ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ 

ಬೆಳ್ತಂಗಡಿ : ವಿಶ್ವ ಯೋಗ ದಿನಾಚರಣೆಯ 12 ನೇ ವರ್ಷದ ಪ್ರಯುಕ್ತ ಉಜಿರೆ ಮಹಾಶಕ್ತಿ ಕೇಂದ್ರ ಮತ್ತು ಯುವಮೋರ್ಚಾ ಬೆಳ್ತಂಗಡಿ ಕೂಡುವಿಕೆಯಲ್ಲಿ ಚಾರ್ಮಾಡಿ ಶಕ್ತಿ ಕೇಂದ್ರದಲ್ಲಿ 12 ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. 

ಯೋಗ ಶಿಬಿರದಲ್ಲಿ ಯೋಗಭ್ಯಾಸವನ್ನು ವೀಣಾ ಪ್ರಭಾಕರ್ ಮತ್ತು ಅಭಿಲಾಷ್ ಚಾರ್ಮಾಡಿ ನೆರವೇರಿಸಿಕೊಟ್ಟರು. ಪ್ರಾಸ್ತವಿಕವಾಗಿ ಮಾತನಾಡಿದ ಮುಂಡಾಜೆ ಸಹಕಾರ ಭಾರತಿಯ ಅಧ್ಯಕ್ಷ  ಕೆ. ಪ್ರಕಾಶ್ ನಾರಾಯಣ ರಾವ್ ಮಠದಮಜಲು ಮಾತನಾಡಿ ನಿತ್ಯ ಜೀವನದಲ್ಲಿ ನಾವು ಋಷಿ ಪರಂಪರೆಯ ಯೋಗವನ್ನು ಅಳವಡಿಸಿಕೊಂಡಾಗ ರೋಗ ಮುಕ್ತ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.

ಚಾರ್ಮಾಡಿ ಶಕ್ತಿ ಕೇಂದ್ರ ಪ್ರಮುಖ್ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ತಾಲೂಕು ರೈತ ಮೋರ್ಚಾ ಸದಸ್ಯರಾದ ದಿವಿನೇಶ್ ಚಾರ್ಮಾಡಿ ಧನ್ಯವಾದವಿತ್ತರು.

Related posts

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪರಸ್ಪರ ಪರಿಚಯ ಕಾರ್ಯಕ್ರಮ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ‘ಮಹಾಪ್ರಸಾದ’ ಕೈಪಿಡಿ ಬಿಡುಗಡೆ

Suddi Udaya

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಸುಲ್ಕೇರಿ: 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿ ಗಗನ್ಯ ದ್ವಿತೀಯ ಸ್ಥಾನ

Suddi Udaya
error: Content is protected !!