ಬೆಳ್ತಂಗಡಿ : ವಿಶ್ವ ಯೋಗ ದಿನಾಚರಣೆಯ 12 ನೇ ವರ್ಷದ ಪ್ರಯುಕ್ತ ಉಜಿರೆ ಮಹಾಶಕ್ತಿ ಕೇಂದ್ರ ಮತ್ತು ಯುವಮೋರ್ಚಾ ಬೆಳ್ತಂಗಡಿ ಕೂಡುವಿಕೆಯಲ್ಲಿ ಚಾರ್ಮಾಡಿ ಶಕ್ತಿ ಕೇಂದ್ರದಲ್ಲಿ 12 ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಯೋಗ ಶಿಬಿರದಲ್ಲಿ ಯೋಗಭ್ಯಾಸವನ್ನು ವೀಣಾ ಪ್ರಭಾಕರ್ ಮತ್ತು ಅಭಿಲಾಷ್ ಚಾರ್ಮಾಡಿ ನೆರವೇರಿಸಿಕೊಟ್ಟರು. ಪ್ರಾಸ್ತವಿಕವಾಗಿ ಮಾತನಾಡಿದ ಮುಂಡಾಜೆ ಸಹಕಾರ ಭಾರತಿಯ ಅಧ್ಯಕ್ಷ ಕೆ. ಪ್ರಕಾಶ್ ನಾರಾಯಣ ರಾವ್ ಮಠದಮಜಲು ಮಾತನಾಡಿ ನಿತ್ಯ ಜೀವನದಲ್ಲಿ ನಾವು ಋಷಿ ಪರಂಪರೆಯ ಯೋಗವನ್ನು ಅಳವಡಿಸಿಕೊಂಡಾಗ ರೋಗ ಮುಕ್ತ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.
ಚಾರ್ಮಾಡಿ ಶಕ್ತಿ ಕೇಂದ್ರ ಪ್ರಮುಖ್ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ತಾಲೂಕು ರೈತ ಮೋರ್ಚಾ ಸದಸ್ಯರಾದ ದಿವಿನೇಶ್ ಚಾರ್ಮಾಡಿ ಧನ್ಯವಾದವಿತ್ತರು.













