ಸವಣಾಲು: ಫಲ್ಗುಣಿ ಕುಣಿತ ಭಜನಾ ತಂಡ ಸವಣಾಲು ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕೊಡೆಯನ್ನು ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ವಿತರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಕುಮಾರ್ ಶಿಕ್ಷಣದ ಮೌಲ್ಯ ಮತ್ತು ಭಜನೆಯ ಸಂಸ್ಕೃತಿಯ ಬಗ್ಗೆ ತಿಳಿಯಪಡಿಸಿದರು.
ಕಾರ್ಯಕ್ರಮದಲ್ಲಿ ಭಜನೆಯ ಗುರುಗಳಾದ ಸಂದೇಶ್ ಮದ್ದಡ್ಕ ಬೆಳ್ತಂಗಡಿ ವಲಯದ ಯೋಜನಾಧಿಕಾರಿ, ಮಾಜಿ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸಿಎ ಬ್ಯಾಂಕ್ ಉಪಾಧ್ಯಕ್ಷ ಗಣೇಶ್ ಭಂಡಾರಿ, ಫಲ್ಗುಣೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಲಕ್ಷ್ಮೀ ವಸಂತ ಗೌಡ ಮತ್ತು ಮಹಿಳಾ ಮಂಡಲದ ಸದಸ್ಯರಾದ ವೀಣಾ, ಚೈತ್ರಾ ಶೆಟ್ಟಿ, ಭಾರತೀ ಶೆಟ್ಟಿ, ಸುಮಲತ, ಮಲ್ಲಿಕಾ, ವಿಮಲ, ಸಾರಿಕಾ, ಪದ್ಮವತಿ, ಪ್ರಿಯ, ಸೌಮ್ಯ, ಪುಷ್ಪ, ಶುಭ, ಪ್ರೇಮ, ಮತ್ತು ಭಜನಾ ತಂಡದ ಮಕ್ಕಳ ಪೋಷಕರು ಭಾಗವಹಿಸಿದರು. ಪ್ರೇಮ ಸ್ವಾಗತಿಸಿದರು.












