ಉರುವಾಲು : ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ / ನಾಯಕಿ ಆಯ್ಕೆ ಹಾಗೂ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆಯು ಚುನಾವಣೆ ಪ್ರಕ್ರಿಯೆ ಮೂಲಕ ನಡೆಯಿತು. ಚುನಾವಣೆ ಬಳಿಕ ಶಾಲಾ ನಾಯಕನಾಗಿ ಜ್ಞಾನೇಶ್ 10ನೇ ತರಗತಿ ಆಯ್ಕೆ ಗೊಂಡರು. ಶಾಲಾ ಉಪ ನಾಯಕನಾಗಿ ಯಜ್ಞೇಶ್ 9 ನೇ ತರಗತಿ ಆಯ್ಕೆಗೊಂಡರು.
ಬಳಿಕ ಕ್ರೀಡಾ ಇಲಾಖೆ ಸಚಿವರಾಗಿ ಸಾತ್ವಿಕ್ 9 ನೇ ತರಗತಿ, ಆರೋಗ್ಯ ಇಲಾಖೆ ಸಚಿವರಾಗಿ ವಿಕಾಸ್ 10 ನೇ ತರಗತಿ , ಸಾಂಸ್ಕೃತಿಕ ಇಲಾಖೆ ಸಚಿವರಾಗಿ ತ್ರಿತಿಕ್ 8ನೇ ತರಗತಿ, ಗೃಹ ಇಲಾಖೆ ಸಚಿವರಾಗಿ ಪ್ರದ್ಯುತ್ 8 ನೇ ತರಗತಿ ಆಯ್ಕೆಗೊಂಡರು. ಜೊತೆಗೆ ವಿರೋಧ ಪಕ್ಷದ ನಾಯಕಿಯಾಗಿ ಪವೀಕ್ಷ ರೈ 10 ನೇ ತರಗತಿ ಆಯ್ಕೆಗೊಂಡರು. ಸಭಾಪತಿಗಳಾಗಿ ಕನಿಷ್ಕ ಪೂಜಾರಿ ,10ನೇ ತರಗತಿ ಆಯ್ಕೆ ಗೊಂಡರು.
ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ನಡೆಸಿಕೊಟ್ಟರು ಹಾಗೂ ಶಿಕ್ಷಕ ವೃಂದದವರು ಸಹಕರಿಸಿದರು.












