23.5 C
ಪುತ್ತೂರು, ಬೆಳ್ತಂಗಡಿ
August 13, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಕೊಕ್ಕಡದಲ್ಲಿ ವಾಹನ ದಟ್ಟನೆಗೆ ಸವಾರರು ಹೈರಾಣು

ಬೆಳ್ತಂಗಡಿ: ಉಜಿರೆ ಪೆರಿಯಶಾಂತಿ ಸ್ಪರ್ ರಸ್ತೆಯ ಕಾಪಿನಬಾಗಿಲಿನಿಂದ ಕೊಕ್ಕಡ ಜಂಕ್ಷನ್ ತನಕ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಬಸವಳಿದ ಬಗ್ಗೆ ಜೂ. 28 ರಂದು ವರದಿಯಾಗಿದೆ.

ವಾರಂತ್ಯದ ಹಾಗೂ ಸರಣಿ ರಜೆಯಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರರ್ಥಿಗಳ ಸಂಖ್ಯೆ ಹೆಚ್ಚಿದ ಕಾರಣ ಕೊಕ್ಕಡ ಪೇಟೆಯಿಂದ ಕಾಪಿನಬಾಗಿಲಿನವರೆಗೆ ರಸ್ತೆಯ ಎರಡು ಬದಿ ವಾಹನ ದಟ್ಟನೆಯಿಂದ ಗಂಟೆಗಟ್ಟಲೆ ಪ್ರಯಾಣಿಕರು ಜಡಿ ಮಳೆಯೊಂದಿಗೆ ರಸ್ತೆ ನಡುವೆ ಸಿಲುಕಿಕೊಂಡಿದ್ದರು. ಬೆಂಗಳೂರು, ಹಾಸನ ಭಾಗದ ಬಸ್ ಗಳು, ಟೂರಿಸ್ಟ್ ವಾಹನ, ಆ ಭಾಗದ ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟ ಅನುಭವಿಸಿದರು.

ಸೌತಡ್ಕ ಮಹಾಗಣಪತಿ ಕ್ಷೇತ್ರಕದ ದ್ವಾರದ ಬಳಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ಆ ಕಡೆಯಿಂದ ಬರುವ ಹಾಗೂ ಹೋಗುವ ವಾಹನಳು ಆಚೆ ಇಚೆ ಹೋಗಲಾರದೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕಿಗೊಂಡಿತ್ತು. ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೊಲೀಸರು ಇಲ್ಲದೇ ಬಸ್ ನಿರ್ವಹಾಕರು ಸಾರ್ವಜನಿಕರು ಕ್ಲಿಯರ್ ಮಾಡಬೇಕಾದ ಪರಿಸ್ಥಿತಿ ಇದೆ ಹಾಗಾಗಿ ಪೊಲೀಸ್ ಇಲಾಖೆ ಇಲ್ಲಿಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಚ್ಚಿನ ವಾರಂತ್ಯದಲ್ಲಿ ಕೊಕ್ಕಡ ಪೇಟೆ ಟ್ರಾಫಿಕ್ ಜಾಮ್ ಗೆ ಒಳಗಾಗುತ್ತಿದೆ. ಇಂದು ಹಾಲು ತರಲು ಪೇಟೆಗೆ ಹೋದಲ್ಲಿ ವಾಹನ ದಟ್ಟನೆಯಿಂದ ಒಂದು ಗಂಟೆ ಬಳಿಕ ಮನೆ ಸೇರುವ ಪರಿಸ್ಥಿತಿ, ಪ್ರತಿ ಭಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಎನ್ನುತ್ತಾರೆ ಸಾರ್ವಜನಿಕರು.

Related posts

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ: ನೌಷದ್ ತಂಗಿ, ತಾಯಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ನೇತೃತ್ವದ ತಂಡ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ಕನ್ಯಾಡಿ II: ವಿ. ಆರ್. ಶಾರದಾ ನಿಧನ

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya

ಕರಾಯ: ಚರಂಡಿಗೆ ಬಿದ್ದ ಖಾಸಗಿ ಬಸ್

Suddi Udaya

ಲಾಯಿಲ: ಪಡ್ಲಾಡಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ: ಅಧ್ಯಕ್ಷರಾಗಿ ವಿನಯ್ ಎಂ.ಎಸ್. : ಕಾರ್ಯದರ್ಶಿಯಾಗಿ ದಿನಕರ್ ದೇವೊಟ್ಟು

Suddi Udaya
error: Content is protected !!