23.5 C
ಪುತ್ತೂರು, ಬೆಳ್ತಂಗಡಿ
August 13, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಕೊಕ್ಕಡದಲ್ಲಿ ವಾಹನ ದಟ್ಟನೆಗೆ ಸವಾರರು ಹೈರಾಣು

ಬೆಳ್ತಂಗಡಿ: ಉಜಿರೆ ಪೆರಿಯಶಾಂತಿ ಸ್ಪರ್ ರಸ್ತೆಯ ಕಾಪಿನಬಾಗಿಲಿನಿಂದ ಕೊಕ್ಕಡ ಜಂಕ್ಷನ್ ತನಕ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಬಸವಳಿದ ಬಗ್ಗೆ ಜೂ. 28 ರಂದು ವರದಿಯಾಗಿದೆ.

ವಾರಂತ್ಯದ ಹಾಗೂ ಸರಣಿ ರಜೆಯಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರರ್ಥಿಗಳ ಸಂಖ್ಯೆ ಹೆಚ್ಚಿದ ಕಾರಣ ಕೊಕ್ಕಡ ಪೇಟೆಯಿಂದ ಕಾಪಿನಬಾಗಿಲಿನವರೆಗೆ ರಸ್ತೆಯ ಎರಡು ಬದಿ ವಾಹನ ದಟ್ಟನೆಯಿಂದ ಗಂಟೆಗಟ್ಟಲೆ ಪ್ರಯಾಣಿಕರು ಜಡಿ ಮಳೆಯೊಂದಿಗೆ ರಸ್ತೆ ನಡುವೆ ಸಿಲುಕಿಕೊಂಡಿದ್ದರು. ಬೆಂಗಳೂರು, ಹಾಸನ ಭಾಗದ ಬಸ್ ಗಳು, ಟೂರಿಸ್ಟ್ ವಾಹನ, ಆ ಭಾಗದ ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟ ಅನುಭವಿಸಿದರು.

ಸೌತಡ್ಕ ಮಹಾಗಣಪತಿ ಕ್ಷೇತ್ರಕದ ದ್ವಾರದ ಬಳಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ಆ ಕಡೆಯಿಂದ ಬರುವ ಹಾಗೂ ಹೋಗುವ ವಾಹನಳು ಆಚೆ ಇಚೆ ಹೋಗಲಾರದೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕಿಗೊಂಡಿತ್ತು. ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೊಲೀಸರು ಇಲ್ಲದೇ ಬಸ್ ನಿರ್ವಹಾಕರು ಸಾರ್ವಜನಿಕರು ಕ್ಲಿಯರ್ ಮಾಡಬೇಕಾದ ಪರಿಸ್ಥಿತಿ ಇದೆ ಹಾಗಾಗಿ ಪೊಲೀಸ್ ಇಲಾಖೆ ಇಲ್ಲಿಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಚ್ಚಿನ ವಾರಂತ್ಯದಲ್ಲಿ ಕೊಕ್ಕಡ ಪೇಟೆ ಟ್ರಾಫಿಕ್ ಜಾಮ್ ಗೆ ಒಳಗಾಗುತ್ತಿದೆ. ಇಂದು ಹಾಲು ತರಲು ಪೇಟೆಗೆ ಹೋದಲ್ಲಿ ವಾಹನ ದಟ್ಟನೆಯಿಂದ ಒಂದು ಗಂಟೆ ಬಳಿಕ ಮನೆ ಸೇರುವ ಪರಿಸ್ಥಿತಿ, ಪ್ರತಿ ಭಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಎನ್ನುತ್ತಾರೆ ಸಾರ್ವಜನಿಕರು.

Related posts

ಯಂಗ್ ಚಾಲೆಂಜರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ- ಶೈಕ್ಷಣಿಕ ನಿಧಿ ಹಸ್ತಾಂತರ

Suddi Udaya

ಎಸ್ ಕೆ ಎಸ್ ಎಸ್ ಎಫ್ ಕಕ್ಕಿಂಜೆ ಶಾಖೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ವೇಣೂರು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಲೆಕ್ಕಿಗ ಲೋಕಯ್ಯ ಗೌಡ ನಿಧನ

Suddi Udaya

ಕೊಕ್ಕಡ: ಶ್ರೀಮತಿ ಮೋನಕ್ಕ ನಿಧನ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ

Suddi Udaya
error: Content is protected !!