August 15, 2026
ಅಭಿನಂದನೆಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಚೆನ್ನೈನಲ್ಲಿ ಧೂಳೆಬ್ಬಿಸಿದ ದಕ್ಷಿಣ ಕನ್ನಡದ ಹುಡುಗಿಯರು,ಆಲ್ ಇಂಡಿಯಾ ಥ್ರೋಬಾಲ್ ಕೂಟದಲ್ಲಿ ಪ್ರಚಂಡ ಸಾಧನೆ ಮುಳಿಯ ಜ್ಯುವೆಲ್ಸ್ ನಿಂದ ಸಮವಸ್ತ್ರ ಕೊಡುಗೆ

ಬೆಳ್ತಂಗಡಿ: ಕ್ರೀಡಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಸಾಧನೆಯನ್ನು ಮತ್ತೊಮ್ಮೆ ನೆನಪು ಮಾಡುವಂತಹ ಕೆಲಸವನ್ನು ದಕ್ಷಿಣ ಕನ್ನಡದ ಪ್ರತಿಭಾನ್ವಿತ ಯುವತಿಯರ ತಂಡ ಮಾಡಿದೆ. ದಕ್ಷಿಣ ಕನ್ನಡದಿಂದ ದೂರದ ತಮಿಳುನಾಡು ತೆರಳಿ ಅಲ್ಲಿ ಪ್ರಥಮ ಸ್ಥಾನ ಪಡೆದು ಕನ್ನಡಿಗರ ಶಕ್ತಿ ತೋರಿಸಿ, ದಕ್ಷಿಣ ಕನ್ನಡಕ್ಕೆ ಕೀರ್ತಿ ತಂದಿದ್ದಾರೆ.

ಜೂ.27-28 ರಂದು ಚೆನ್ನೈನಲ್ಲಿ ಆಲ್ ಇಂಡಿಯಾ ಇಂಟರ್ ಕ್ಲಬ್ ಥ್ರೋಬಾಲ್ ಕೂಟದಲ್ಲಿ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಫ್ರೆಂಡ್ಸ್ ಉಳ್ಳಾಲ ಅಕಾಡೆಮಿ ತಂಡವು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡವನ್ನು ಚೈತನ್ಯ ಪುತ್ತೂರು ಮುನ್ನಡೆಸಿದ್ದರು. ವೈಷ್ಣವಿ ಉಡುಪಿ ಅವರು ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.

ತಂಡವು ಚೈತನ್ಯ ಪುತ್ತೂರು ,ವೈಷ್ಣವಿ ಉಡುಪಿ ವಿಜಯಲಕ್ಷ್ಮಿ ಉಡುಪಿ, ಆಶಿಕಾ ಬಂದಾರು, ಪ್ರತೀಕ್ಷಾ ಕಾರಿಂಜ,ಜಯಶ್ರೀ ಕಾರಿಂಜ, ಕೀರ್ತಿ ಸಂಪ್ಯ, ಕೀರ್ತಿ ಸುಂಕದಕಟ್ಟೆ,ಅಶ್ವಿನಿ ಉಡುಪಿ,ಅಭಿಜ್ಞ ಉಡುಪಿ, ದಿವ್ಯ ಬೆದ್ರ, ಪ್ರಿಯಾ ಮೈಸೂರು,ಕೀರ್ತನಾ ಮೈಸೂರು, ತಂಡದ ತರಬೇತುಗಾರರಾಗಿ ಪ್ರಜ್ವಲ್ ನಡ , ಪ್ರಜಾಕ್ಷ ಪಟ್ರಮೆ,ಸೃಜನ್ ಗೇರುಕಟ್ಟೆ ಅವರನ್ನು ಒಳಗೊಂಡಿತ್ತು. ಕ್ರೀಡಾಪಟುಗಳಿಗೆ ರಾಜ್ಯದ ಶ್ರೇಷ್ಠ ಸ್ವರ್ಣೋದ್ಯಮ ಮಳಿಗೆ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದೆ.

Related posts

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

Suddi Udaya

ಡಿ.17: ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನ

Suddi Udaya

ಮಿತ್ತಬಾಗಿಲು – ಮಲವಂತಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಉತ್ಸವ

Suddi Udaya

‘ಐಐಎಸ್ಇಆರ್ ಆಪ್ಟಿಟ್ಯೂಡ್ ಟೆಸ್ಟ್’ ಪರೀಕ್ಷೆ: ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿಗೆ ಅಭೂತಪೂರ್ವ ಯಶಸ್ಸು

Suddi Udaya

ವೇಣೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಧನುಶ್ರೀ ಎಸ್ ಕುಲಾಲ್ ರಾಜ್ಯಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆ

Suddi Udaya
error: Content is protected !!