ಬೆಳ್ತಂಗಡಿ: ಕ್ರೀಡಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಸಾಧನೆಯನ್ನು ಮತ್ತೊಮ್ಮೆ ನೆನಪು ಮಾಡುವಂತಹ ಕೆಲಸವನ್ನು ದಕ್ಷಿಣ ಕನ್ನಡದ ಪ್ರತಿಭಾನ್ವಿತ ಯುವತಿಯರ ತಂಡ ಮಾಡಿದೆ. ದಕ್ಷಿಣ ಕನ್ನಡದಿಂದ ದೂರದ ತಮಿಳುನಾಡು ತೆರಳಿ ಅಲ್ಲಿ ಪ್ರಥಮ ಸ್ಥಾನ ಪಡೆದು ಕನ್ನಡಿಗರ ಶಕ್ತಿ ತೋರಿಸಿ, ದಕ್ಷಿಣ ಕನ್ನಡಕ್ಕೆ ಕೀರ್ತಿ ತಂದಿದ್ದಾರೆ.
ಜೂ.27-28 ರಂದು ಚೆನ್ನೈನಲ್ಲಿ ಆಲ್ ಇಂಡಿಯಾ ಇಂಟರ್ ಕ್ಲಬ್ ಥ್ರೋಬಾಲ್ ಕೂಟದಲ್ಲಿ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಫ್ರೆಂಡ್ಸ್ ಉಳ್ಳಾಲ ಅಕಾಡೆಮಿ ತಂಡವು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡವನ್ನು ಚೈತನ್ಯ ಪುತ್ತೂರು ಮುನ್ನಡೆಸಿದ್ದರು. ವೈಷ್ಣವಿ ಉಡುಪಿ ಅವರು ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ತಂಡವು ಚೈತನ್ಯ ಪುತ್ತೂರು ,ವೈಷ್ಣವಿ ಉಡುಪಿ ವಿಜಯಲಕ್ಷ್ಮಿ ಉಡುಪಿ, ಆಶಿಕಾ ಬಂದಾರು, ಪ್ರತೀಕ್ಷಾ ಕಾರಿಂಜ,ಜಯಶ್ರೀ ಕಾರಿಂಜ, ಕೀರ್ತಿ ಸಂಪ್ಯ, ಕೀರ್ತಿ ಸುಂಕದಕಟ್ಟೆ,ಅಶ್ವಿನಿ ಉಡುಪಿ,ಅಭಿಜ್ಞ ಉಡುಪಿ, ದಿವ್ಯ ಬೆದ್ರ, ಪ್ರಿಯಾ ಮೈಸೂರು,ಕೀರ್ತನಾ ಮೈಸೂರು, ತಂಡದ ತರಬೇತುಗಾರರಾಗಿ ಪ್ರಜ್ವಲ್ ನಡ , ಪ್ರಜಾಕ್ಷ ಪಟ್ರಮೆ,ಸೃಜನ್ ಗೇರುಕಟ್ಟೆ ಅವರನ್ನು ಒಳಗೊಂಡಿತ್ತು. ಕ್ರೀಡಾಪಟುಗಳಿಗೆ ರಾಜ್ಯದ ಶ್ರೇಷ್ಠ ಸ್ವರ್ಣೋದ್ಯಮ ಮಳಿಗೆ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದೆ.













