
ಬೆಳ್ತಂಗಡಿ: ಸಮಾಜ ಸೇವೆಯೇ ನನ್ನ ಉಸಿರು ಎಂಬ ದ್ಯೇಯವನ್ನು ಇಟ್ಟುಕೊಂಡು ಸಮಾಜದಲ್ಲಿ ಜಾತಿ ಧರ್ಮ ಭೇದವನ್ನು ಮರೆತು ಯಾವುದೇ ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸುವ ಗೋಪಾಲಕೃಷ್ಣಶೆಟ್ಟಿ ನೆತ್ತರ
ಇವರಿಗೆ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ಅವಾರ್ಡ್ ಲಭಿಸಿದೆ.
ಬಡ ಕುಟುಂಬದ ಆರೋಗ್ಯದ ಸಮಸ್ಯೆಗೆ ವೈದ್ಯಕೀಯ ವೆಚ್ಚವನ್ನು ಕ್ರೌಡ್ ಫಂಡಿಂಗ್ ಮೂಲಕ ಒದಗಿಸಿಕೊಡುತ್ತಾ ಜೀವವನ್ನು ಉಳಿಸುವ ಮಾನವೀಯ ಕಾರ್ಯ ಜೊತೆಗೆ ರಕ್ತದಾನವೇ ಶ್ರೇಷ್ಠದಾನ ಎಂಬಂತೆ ತಾನು ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಇವರು ಸಮಾಜದಲ್ಲಿರುವ ಯುವಕರಿಗೆ ಮಾದರಿಯಾಗಿದ್ದಾರೆ .
ಇವರ ಈ ವಿಶಿಷ್ಟ ಸೇವೆಯನ್ನು ಗುರುತಿಸಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181
ಮೈಸೂರಿನಲ್ಲಿ ನಡೆದ ಅನುಬಂಧ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು .








