ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿಯಲ್ಲಿ ಜು.10.ರಂದು ಪೂರ್ವಾಹ್ನ 10.00 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಇಂಧನ ಇಲಾಖೆಯ ಸೌಲಭ್ಯಗಳ ಮಾಹಿತಿ, ವಿವಿಧ ವಿದ್ಯುತ್ ಸಲಕರಣೆಗಳ ಸುರಕ್ಷತಾ ಬಳಕೆ, ನಿರ್ವಹಣೆ, ದುರಸ್ತಿ, ಮಳೆಗಾಲದಲ್ಲಿ ವಿವಿಧ ವಿಪತ್ತು ನಿರ್ವಹಣೆ ಹಾಗೂ ಮೊಬೈಲ್ Starter ತಂತ್ರಜ್ಞಾನ ದ ಬಗ್ಗೆ ಒಂದು ದಿನದ ಉಚಿತ ತರಬೇತಿಯನ್ನು ಹಮ್ಮಿಕೊಂಡಿದೆ.
ಉಜಿರೆ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಎಸ್ ನವೀನ್ ಕುಮಾರ್, ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಉಸ್ಮಾನ್, ಹಾಗೂ ಪುತ್ತೂರು ಮಾಯಾಟ್ರೋನಿಕ್ಸ್ ಶರತ್, ನಾಗೇಶ್ ಪಿ. ರಕ್ಷಾ ಎಂಟರ್ ಪ್ರೈಸಸ್ ಉಜಿರೆ* ಇವರುಗಳು ತರಬೇತಿ ನೀಡಲಿದ್ದಾರೆ.
ರೈತ/ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ತರಬೇತಿಯಲ್ಲಿ ಭಾಗವಹಿಸುವ ರೈತ/ರೈತ ಮಹಿಳೆಯರು ಕಡ್ಡಾಯವಾಗಿ ತಮ್ಮ FID ಅಥವಾ Voter Id ಸಂಖ್ಯೆಯನ್ನು ತರುವಂತೆ ಕೋರಲಾಗಿದೆ. ತರಬೇತಿಯ ವೇಳೆ ಊಟೋಪಚಾರದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಲ್ಲಿ ಮಾಡಲಾಗುವುದು















