ಬೆಳ್ತಂಗಡಿ : ಧಾರಕಾರ ಮಳೆ ಮತ್ತು ಭೂ ಕುಸಿತ ಉಂಟಾಗುವ ಸಾಧ್ಯತೆಯಿಂದ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಡಮ್ಮ ಗುಂಡಿಯನ್ನು (ದಿಡುಪೆ ಫಾಲ್ಸ್) ಜು.9 ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ.
ಮಳೆ ಮತ್ತು ಜೋರಾದ ಗಾಳಿ ಬೀಸುತ್ತಿದ್ದು ಪ್ರವಾಸಿಗರ ಸುರಕ್ಷತೆ ಸಲುವಾಗಿ ನೇತ್ರಾವತಿ ಪೀಕ್ ಕೂಡ ಜು.9 ಮತ್ತು ಜು.10 ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಜು.8 ರಂದು ಪ್ರಕಟಣೆ ಹೊರಡಿಸಿದೆ. ಅಲ್ಲದೇ ಜು.7 ಮತ್ತು 8 ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಇದೇ ರೀತಿ ಮಳೆಯ ಅಬ್ಬರ ಮುಂದುವರಿದಲ್ಲಿ ನೇತ್ರಾವತಿ ಪೀಕ್ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರುವ ಸಾಧ್ಯತೆ ಇದೆ.















