ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿವಿಧ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯು ಜು.2ರಂದು ಉಜಿರೆ ಕುಂಜರ್ಪದಲ್ಲಿ ಜರುಗಿತು.
೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಾಣ್ಯಾಲು, ಕಾರ್ಯದರ್ಶಿಯಾಗಿ ರಿತೇಶ್ ಪೂಜಾರಿ ರೆಂಜಾಳ, ಕೋಶಾಧಿಕಾರಿಯಾಗಿ ಜಯಂತ್(ಪದ್ಮನಾಭ) ಶೆಟ್ಟಿ ಅರ್ತಿಲ ಮಡಂತ್ಯಾರ್ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಗಿರೀಶ್ ಪೂಜಾರಿ ಪೆರ್ಲ, ರಮೇಶ್ ಓಡಲ, ಶಿವಪ್ಪ ನಾಯ್ಕ ಪೆರ್ಲ, ಉದಯ ಮಾಚಾರ್, ಸುದೇಶ್ ಶೆಟ್ಟಿ ಕುಂಠಿನಿ, ದಿನೇಶ್ ಪೂಜಾರಿ ಮಾತೃಶ್ರೀ ಆಟೋ ಉಜಿರೆ, ಅಶ್ವಥ್ ಶೆಟ್ಟಿ ಲ್ಯಾಲ, ಸಂತೋಷ್ ಕುಲಾಲ್ ವಿವೇಕಾನಂದ ನಗರ, ಮಂಜುನಾಥ್ ಪೂಜಾರಿ ಕಲ್ಮಂಜ, ನಾಗಪ್ರಸಾದ್ ಕುಂಠಿನಿ, ಜೊತೆ ಕಾರ್ಯದರ್ಶಿಗಳಾಗಿ ಜನಾರ್ದನ ಗೌಡ ಕಾಯರ್ತಡ್ಕ, ಸಜನ್ ಪಜಿರಡ್ಕ, ಜಯರಾಮ್ ನಾಯ್ಕ ಅಲಕ್ಕೆ, ಶ್ರವಣ್. ಕಡಿರುದ್ಯಾವರ, ನಿಶಾಂತ್ ಗೌಡ ರೆಂಜಾಳ, ನಿರಂಜನ್ ಕಡಂಬು, ಮಾಧವ ಪೂಜಾರಿ ನೆರಿಯ, ಸೃಜನ್ ಪೂಜಾರಿ ಕುಂಜರ್ಪ ಆಯ್ಕೆಯಾಗಿರುತ್ತಾರೆ.















