ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಪಣಕಜೆ ಸಮೀಪ ಸಬರಬೈಲು ಎಂಬಲ್ಲಿ ಮಡಂತ್ಯಾರಿನಿಂದ ಬೆಳ್ತಂಗಡಿ ಕಡೆಗೆ ಸಂಚಾರಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜು. 9 ರಂದು ನಡೆದಿದೆ.

ಕಾರು ಪಲ್ಟಿಯಾದ ಪರಿಣಾಮ ಗಾಜುಗಳು ಹುಡಿಯಾಗಿದ್ದು ಕಾರು ನಜ್ಜುಗುಜ್ಜುಗೊಂಡಿದ್ದು, ಕಾರು ವಾಪಸ್ ಮಡಂತ್ಯಾರು ಕಡೆಗೆ ತಿರುಗಿ ನಿಂತಿದ್ದು ಕಾರಿನಲ್ಲಿದ್ದ ಮೂವರು ಮಂದಿಗೆ ಯಾವುದೇ ಪ್ರಾಣಪಾಯ ಸಂಭವಿಸದೆ ಅದೃಷ್ಟವಾಶತ್ ಪರಾಗಿದ್ದಾರೆ.















