24.8 C
ಪುತ್ತೂರು, ಬೆಳ್ತಂಗಡಿ
August 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮುಂಡಾಜೆ: ನೆಟ್ವರ್ಕ್ ಸಮಸ್ಯೆಗೆ ರಸ್ತೆ ಕಾಮಗಾರಿ ಅಡ್ಡಿ!

ಮುಂಡಾಜೆ: ಮೊಬೈಲ್ ನೆಟ್ವರ್ಕ್ ಗೆ ರಸ್ತೆ ಕಾಮಗಾರಿ ಅಡ್ಡಿಯಾಗಿರುವ ಘಟನೆ ಮುಂಡಾಜೆಯಲ್ಲಿ ನಡೆದಿದೆ.

ಮುಂಡಾಜೆ ಗ್ರಾಮದಲ್ಲಿ ಕಳೆದ ಕೆಲ‌ ದಿನಗಳಿಂದ ಖಾಸಗಿ ಮೊಬೈಲ್ ಟವರ್ ನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ. ಇಲ್ಲಿ ವಿದ್ಯುತ್ ಇದ್ದರೆ ಮಾತ್ರ ನೆಟ್ವರ್ಕ್ ಸಿಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಮುಂಡಾಜೆ ಭಾಗದಲ್ಲಿ ವಿದ್ಯುತ್ ಸಮಸ್ಯೆ ವಿಪರೀತವಾಗಿದೆ. ಇದರಿಂದ ಇಲ್ಲಿನ ಸಾವಿರಾರು. ಗ್ರಾಹಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮೊಬೈಲ್ ಟವರ್ ಸುತ್ತ ಗಿಡಗಂಟಿ, ಬಳ್ಳಿಗಳು ಅವರಿಸಿದ್ದು, ಅವು ಟವರ್ ನ್ನು ಕೂಡ ಸುತ್ತುವರೆದಿವೆ.
ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ನೆಟ್ವರ್ಕ್ ಸರಿಪಡಿಸಲು ರಸ್ತೆ ಅಡ್ಡಿಯಾಗಿದೆ,” ಎನ್ನುವ ರೋಚಕ ಉತ್ತರ ಲಭಿಸಿದೆ.

ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಟವರ್ ಬಳಿ ಗುಡ್ಡವನ್ನು ಕಡಿಯಲಾಗಿದ್ದು, ಇದರಿಂದಾಗಿ ಗುಡ್ಡದ ಮೇಲಿರುವ ಟವರ್ ಬಳಿಯಿರುವ ಜನರೇಟರ್‌ಗೆ ಇಂಧನ ಸರಬರಾಜು ಮಾಡಲು ತೊಂದರೆಯುಂಟಾಗಿ ಈ ರೀತಿ ಸಮಸ್ಯೆ ಮರುಕಳಿಸುತ್ತಿದೆ ಎನ್ನುವ ಸಮಜಾಯಿಷಿ ದೊರೆತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ದಿನಪೂರ್ತಿ ನೆಟ್ವರ್ಕ್ ಸಮಸ್ಯೆಯ ಪರಿಣಾಮ ಯಾವುದೇ ಕೆಲಸ ನಿರ್ವಹಿಸಲು ಅಡ್ಡಿಯಾಗಿದ್ದು, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದನೆ ಇಲ್ಲದಂತಾಗಿದೆ.

Related posts

ಕೊಕ್ಕಡ ಜಾರಿಗೆತಡಿ ನಿವಾಸಿ ಮೋನಪ್ಪ ಗೌಡ ನಿಧನ

Suddi Udaya

ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಆಹಾರ ಮತ್ತು ಪೌಷ್ಠಿಕತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya

ಜು.10: ಬೆಳ್ತಂಗಡಿಯಲ್ಲಿ ರೈತರಿಗೆ ವಿದ್ಯುತ್ ಸುರಕ್ಷತೆ ಕುರಿತು ತರಬೇತಿ

Suddi Udaya

ಸುಲ್ಕೇರಿಮೊಗ್ರು ಕಂಬಳದಡ್ಡ ನಿವಾಸಿ ಅಣ್ಣಿ ಮಡಿವಾಳ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ ರಾಘವೇಂದ್ರ ಮಠಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ

Suddi Udaya
error: Content is protected !!