ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಪುಸ್ತಕಗಳ ಓದಿನ ಕುರಿತಾದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯ ಉಜಿರೆ ಇಲ್ಲಿನ ಮುಖ್ಯ ಗ್ರಂಥಪಾಲಕಿಯಾದ ಡಾ.ರಜತಾ ಪಿ ಶೆಟ್ಟಿ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಅಗತ್ಯ ,ಓದಿನ ನಂತರ ಇನ್ನೊಬ್ಬರ ಜೊತೆ ಹೇಗೆ ಅದನ್ನು ಹಂಚಿಕೊಳ್ಳಬೇಕು ಅದರಿಂದ ಆಗುವ ಲಾಭ ಏನು ? ವಿದ್ಯಾರ್ಥಿಗಳ ಸೃಜನ ಶೀಲತೆ ಹೆಚ್ಚಿಸುವ, ನೆನಪಿನ ಶಕ್ತಿಯ ಹೆಚ್ಚಿಸುವ ಹಾಗೂ ಬರವಣಿಗೆ ಕೌಶಲಗಳನ್ನು ಹೆಚ್ಚಿಸುವ ಹತ್ತು ಹಲವು ವಿಚಾರಗಳನ್ನು ಉದಾಹರಣೆ ನಿದರ್ಶನಗಳೊಂದಿಗೆ ವಿವರಿಸಿದರು.
ಶಾಲಾ ವಿದ್ಯಾರ್ಥಿನಿ ಕುಮಾರಿ ಆರಾಧ್ಯ ಪಿ ಜೋಶಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿ, ಡಿಯೋನ್ ಅತಿಥಿಗಳ ಕಿರು ಪರಿಚಯ ಮಾಡಿ , ವಿನುತ ಧನ್ಯವಾದ ಇತ್ತರು.















