July 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ರಚನಾ ಕಮ್ಮಟಕ್ಕೆ ಚಾಲನೆ

ಉಜಿರೆ : ಕಾವ್ಯ ಎಂಬೂದು ಮಾನವೀಯ ನೆಲೆಯಲ್ಲಿ ಮನಸ್ಸಿನ ಆಳದಿಂದ ಮೂಡುವ ಸಂವೇದನಾ ಪ್ರತಿಭೆ. ಕಾವ್ಯ ಕವನಗಳು ಸಂತೋಷ, ದುಃಖ, ಪ್ರೀತಿ, ಪ್ರಕೃತಿ, ಸಮಾಜ ಮತ್ತು ಬದುಕಿನ ನಾನ ಮುಖಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಪಡಿಸುತ್ತದೆ. ಅಕ್ಷರಗಳ ಮೋಹ ಹಾಗು ಸಾಹಿತ್ಯ ಒಲವನ್ನು ಬೆಳೆಸಿಕೊಂಡಾಗ ರಸಭರಿತವಾದ ಜೀವನ ನಮ್ಮದಾಗುತ್ತದೆ. ಪರರ ನೋವು ಮತ್ತು ನಲಿವಿನೊಂದಿಗೆ ಬೆರೆತು ಸಮನ್ವಯದಿಂದ ಬದುಕುವ ಸಮಾಜ ರೂಪುಗೊಳ್ಳುತ್ತದೆ ಎಂದು ಸು ಫ್ರಮ್ ಸೋ ಸಿನೆಮಾ ಖ್ಯಾತಿಯ ಕವಯಿತ್ರಿ ಪೂರ್ಣಿಮಾ ಸುರೇಶ್ ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ದಿನದ ಕಾವ್ಯ ಕಟ್ಟುವ ಬಗೆ ಕಾವ್ಯ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಆಧುನಿಕ ಒತ್ತಡದ ಬದುಕಿನಲ್ಲಿ ಮನುಷ್ಯ ಸಂವೇದನಾ ರಹಿತನಾಗುತ್ತಿದ್ದಾನೆ. ಸಂವೇದನೆ ಇದ್ದಾಗ ಮಾತ್ರ ಮತ್ತೊಬ್ಬರ ನೋವನ್ನು ಅರಿತುಕೊಂಡು ಸ್ಪಂದಿಸಲು ಸಾಧ್ಯ. ಬದುಕಿನ ಪ್ರತಿಯೊಂದು ಮಜುಲುಗಳನ್ನು ಸವಿಯಬೇಕು ಹೊಸತನದಿಂದ ಅನುಭವಿಸಬೇಕು. ಸಾಹಿತ್ಯ ಸದಾ ಬದುಕಿಗೆ ಮುದ ನೀಡುವ ಜೊತೆಗೆ ಹೊಸ ಹೊಳವು ಮತ್ತು ಹೊಸ ದೃಷ್ಟಿಕೋನವನ್ನು ಬೆಳೆಸುತ್ತದೆ. ಪ್ರತಿಯೊಬ್ಬನೊಳಗೂ ಕತೆ, ಕವನ , ಕವಿತೆಯನ್ನು ಹೇಳಬಲ್ಲ ಕವಿ ಇರುತ್ತಾನೆ. ಅದನ್ನು ಮನಗಾಣುವ ಪ್ರಯತ್ನ ನಮ್ಮಿಂದಾಗಬೇಕು. ಈ ನಾಡಿನ ಮಹಾನ್ ಕವಿಗಳ ಬದುಕು ಮತ್ತು ಸಾಹಿತ್ಯ ಹೊಸ ತಲೆಮಾರಿನ ಕವಿಗಳಿಗೆ ಪ್ರೇರಣೆಯಾಗುವುದರ ಜೊತೆಗೆ ಹೊಸ ಸಾಹಿತ್ಯಗಳ ಹುಟ್ಟು ನಮ್ಮಿಂದ ಸಾಧ್ಯವಾಗಬೇಕು ಎಂದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ. ಉದ್ಘಾಟಿಸಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತದೆ. ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಲು ನಾಡಿನ ಜ್ಞಾನ ಪೀಠ ಪ್ರಶಸ್ತಿ ವಿಜೇತರಂತಹ ಧೀಮಂತ ಸಾಹಿತಿಗಳನ್ನು ಈ ಕಾಲೇಜಿಗೆ ಆಮಂತ್ರಿಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಗಿದೆ.
ಇದರ ಭಾಗವಾಗಿ ಇಂದು ಒಂದು ದಿನದ ಕಾವ್ಯ ರಚನಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಮತ್ತು ಹೊಸ ಸಾಹಿತ್ಯವನ್ನು ಸೃಷ್ಟಿಸಲು ಅಡಿಪಾಯವಾಗಿದೆ. ವಿರಚಿತ ಗೊಂಡ ಕಾವ್ಯಗಳು ಮನಸುಗಳನ್ನು ಬೆಸೆಯುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್ ಮಾತನಾಡಿ, ಕನ್ನಡ ಕಾವ್ಯವು ಕಾಲಕ್ಕೆ ತಕ್ಕಂತೆ ಹೊಸ ರೂಪಗಳನ್ನು ಮತ್ತು ಹೊಸ ವಿಚಾರಗಳನ್ನು ಅಳವಡಿಸಿಕೊಂಡಿದೆ. ಈ ಸಮೃದ್ಧ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯವನ್ನು ಕೇವಲ ಪರೀಕ್ಷೆಯ ವಿಷಯವಾಗಿ ಮಾತ್ರವಲ್ಲ, ಜೀವನವನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿಯೂ ನೋಡಬೇಕಾಗಿದೆ. ಉತ್ತಮ ಕಾವ್ಯ ರಚನೆಗೆ ಭಾಷೆಯ ಮೇಲೆ ಪ್ರಭುತ್ವವಿರುವುದಷ್ಟೇ ಸಾಕಾಗುವುದಿಲ್ಲ; ವಿಶಾಲವಾದ ಓದು. ಸೂಕ್ಷ್ಮವಾದ ಅವಲೋಕನ, ಸಮಾಜದ ಬಗೆಗಿನ ಕಾಳಜಿ ಮತ್ತು ನಿರಂತರವಾದ ಅಭ್ಯಾಸವೂ ಅಗತ್ಯವಾಗಿರುತ್ತದೆ. ನಾವು ಹೆಚ್ಚು ಓದಿದಷ್ಟೂ ಹೆಚ್ಚು ಚಿಂತಿಸಿದಷ್ಟೂ ಮತ್ತು ಹೆಚ್ಚು ಅನುಭವಿಸಿದಷ್ಟೂ ನಮ್ಮ ಬರವಣಿಗೆ ಸಮೃದ್ಧವಾಗುತ್ತದೆ.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಕಾವ್ಯ ಕಟ್ಟುವ ಬಗೆ ಕಾವ್ಯ ರಚನಾ ಕಮ್ಮಟ ನಡೆಯಿತು.‌

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಸೇರಿದಂತೆ ವಿವಿಧ ಉಪನ್ಯಾಸಕ ಡಾ. ದಿವಾಕರ ಕೊಕ್ಕಡ, ಡಾ. ನಾಗಣ್ಣ, ಡಾ. ರವಿಶಂಕರ್ ಹಾಗೂ ಇತರೆ ಉಪನ್ಯಾಸಕರು , ವಿದ್ಯಾರ್ಥಿಗಳು ಭಾಗಿಯಾಗಿದ್ದರ. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕವನಾ ಚಾರ್ಮಾಡಿ ನಿರೂಪಿಸಿ, ವಂದಿಸಿದರು. ಸಹಪ್ರಾಧ್ಯಪಕ ಹಾಗು ಹಿರಿಯ ಕಥೆಗಾರ ಡಾ. ಹಳೆಮನೆ ರಾಜಶೇಖರ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ಮಲಮಂತಿಗೆ: ಕೃಷಿಕ ಶೇಖರ್ ಗೌಡ ನಿಧನ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ ಅಂತರಾಷ್ಟ್ರಿಯ ಯೋಗ ದಿನಾಚರಣೆ.

Suddi Udaya

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪತ್ತನಾಜೆ: ಉತ್ಸವಗಳ ಸಮಾಪನ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya
error: Content is protected !!