ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಲಾಯಿಲ: ಇಲ್ಲಿಯ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಕಸ್ತೂರಿ ರವರು ಮಾನಸಿಕ ಖಾಯಿಲೆಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟ ಘಟನೆ ಮೇ.10 ರಂದು ನಡೆದಿದೆ.

ಚೇತನ್ ರವರ ದೂರಿನಂತೆ ಲಾಯಿಲ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಚೇತನ್ ರವರ ತಾಯಿ ಶ್ರೀಮತಿ ಕಸ್ತೂರಿ (69 ವರ್ಷ)ರವರು ಸುಮಾರು 3-4 ತಿಂಗಳಿಂದ ಮಾನಸಿಕ ಸಮಸ್ಯೆಯಿದ್ದು ಜೊತೆಗೆ ತಲೆಕೂದಲಿಗೆ ಸಂಬಂಧಪಟ್ಟ ಖಾಯಿಲೆಯಿದ್ದು ಅದಕ್ಕೆ ಜೌಷಧಿ ಹಾಕಿದ್ದು ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಅಂದರೆ ಅಲರ್ಜಿ ಆಗಿರುತ್ತದೆ. ಮೇ 09 ರಂದು ಬೆಳಿಗ್ಗೆ ಚೇತನ್ ಪೇಟೆಗೆ ಹೋಗಿದ್ದು ನಂತರ ಮನೆಗೆ ಬಂದು ನೋಡಿದಾಗ ಕಸ್ತೂರಿ ರವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಮೇ10 ರಂದು ಬೆಳಿಗ್ಗೆ ಸ್ಥಳೀಯರು ಪಿರ್ಯಾದಿದಾರರಿಗೆ ಕರೆ ಮಾಡಿ ಕಸ್ತೂರಿ ರವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಶ್ರೀ ಬಾಲಚಾಮುಂಡಿ ದೈವಸ್ಥಾನದ ಹಿಂಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚೇತನ್ ಹೋಗಿ ನೋಡಿದಾಗ ಕಸ್ತೂರಿ ರವರು ಮೃತಪಟ್ಟಿರುವುದಾಗಿದೆ.

ಚೇತನ್ ತಾಯಿ ಕಸ್ತೂರಿ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ 21/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಡಿ.8 (ನಾಳೆ) 11ನೇ ವರ್ಷದ ಪಾದಯಾತ್ರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಧ್ಯಾಹ್ನ 3 ಕ್ಕೆ ಪಾದಯಾತ್ರೆಗೆ ಚಾಲನೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ : ಬಿಜೆಪಿ ಗರ್ಡಾಡಿ ಶಕ್ತಿ ಕೇಂದ್ರ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಉಜಿರೆ ಶ್ರೀ ಧ ಮಂ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಕಾಳಿದಾಸ ಜಯಂತಿ ಆಚರಣೆ

Suddi Udaya

ಉಜಿರೆ: ಕಿರಣ್ ಆಗ್ರೋಟೆಕ್, ಸ್ಥಳಾಂತರಿತ ನೂತನ ಮಳಿಗೆ ಹಾಗೂ ಸೇವಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!