July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಲಾಯಿಲ: ಇಲ್ಲಿಯ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಕಸ್ತೂರಿ ರವರು ಮಾನಸಿಕ ಖಾಯಿಲೆಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟ ಘಟನೆ ಮೇ.10 ರಂದು ನಡೆದಿದೆ.

ಚೇತನ್ ರವರ ದೂರಿನಂತೆ ಲಾಯಿಲ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಚೇತನ್ ರವರ ತಾಯಿ ಶ್ರೀಮತಿ ಕಸ್ತೂರಿ (69 ವರ್ಷ)ರವರು ಸುಮಾರು 3-4 ತಿಂಗಳಿಂದ ಮಾನಸಿಕ ಸಮಸ್ಯೆಯಿದ್ದು ಜೊತೆಗೆ ತಲೆಕೂದಲಿಗೆ ಸಂಬಂಧಪಟ್ಟ ಖಾಯಿಲೆಯಿದ್ದು ಅದಕ್ಕೆ ಜೌಷಧಿ ಹಾಕಿದ್ದು ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಅಂದರೆ ಅಲರ್ಜಿ ಆಗಿರುತ್ತದೆ. ಮೇ 09 ರಂದು ಬೆಳಿಗ್ಗೆ ಚೇತನ್ ಪೇಟೆಗೆ ಹೋಗಿದ್ದು ನಂತರ ಮನೆಗೆ ಬಂದು ನೋಡಿದಾಗ ಕಸ್ತೂರಿ ರವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಮೇ10 ರಂದು ಬೆಳಿಗ್ಗೆ ಸ್ಥಳೀಯರು ಪಿರ್ಯಾದಿದಾರರಿಗೆ ಕರೆ ಮಾಡಿ ಕಸ್ತೂರಿ ರವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಶ್ರೀ ಬಾಲಚಾಮುಂಡಿ ದೈವಸ್ಥಾನದ ಹಿಂಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚೇತನ್ ಹೋಗಿ ನೋಡಿದಾಗ ಕಸ್ತೂರಿ ರವರು ಮೃತಪಟ್ಟಿರುವುದಾಗಿದೆ.

ಚೇತನ್ ತಾಯಿ ಕಸ್ತೂರಿ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ 21/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕೊಯ್ಯೂರು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ಬದಿನಡೆ ಪುಂಡಿಕಲ್ ಕುಕ್ಕು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ,ಧಾರ್ಮಿಕ ಉಪನ್ಯಾಸ

Suddi Udaya

ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಸಿಯೋನ್ ಆಶ್ರಮ: ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ರವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಉಜಿರೆ ಗಾಂಧಿನಗರ ಅಂಗನವಾಡಿ ಶಾಲೆಗೆ ಎಸ್.ಕೆ ಸದ್ವಿಕ್ ಹುಟ್ಟುಹಬ್ಬದ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರ ಕೊಡುಗೆ

Suddi Udaya
error: Content is protected !!