24.2 C
ಪುತ್ತೂರು, ಬೆಳ್ತಂಗಡಿ
September 2, 2026
ಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು – 99.977 ಪರ್ಸೆಂಟೈಲ್(672ಅಂಕ) ಪಡೆದ ಅಕ್ಷಯ್ ಡಿ.-ತಾಲೂಕಿಗೆ ಪ್ರಥಮ ಸ್ಥಾನ

ಮೂಡುಬಿದಿರೆ: ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರದೇಶ ಪರೀಕ್ಷೆ(ನೀಟ್)ಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಯಾದ ಅಕ್ಷಯ್ ಡಿ 99.977 ಪರ್ಸೆಂಟೈಲ್ (672ಅಂಕ) ಪಡೆದು ಮೂಡುಬಿದಿರೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಹಾಗೂ ಅಖಿಲ ಭಾರತ ಮಟ್ಟದಲ್ಲಿ 456 ನೇ ರ್ಯಾಂಕ್ ಮತ್ತು ಸಾಮಾನ್ಯ ವರ್ಗದಲ್ಲಿ 283 ನೇ ರ್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ:
ಶಮಂತ್ ಪಿ ಗೌಡ 99..835 ಪರ್ಸೆಂಟೈಲ್ (632 ಅಂಕ), ಪ್ರೀತಮ್ ಹೆಚ್ ಎಂ 99.690 ಪರ್ಸೆಂಟೈಲ್ (615 ಅಂಕ ), ಬಿ. ವಿನಯ್ 99.525 ಪರ್ಸೆಂಟೈಲ್ (602), ಮನ್ವಿತ್ ಎಸ್ ಪದ್ಮಶಾಲಿ 99.267 ಪರ್ಸೆಂಟೈಲ್ (588 ಅಂಕ), ಶೋಭಿತಾ ಕೆ ಸಿ 99.182 ಪರ್ಸೆಂಟೈಲ್ (584 ಅಂಕ), ಹರ್ಷಿತ ಸಿ 98.597ಪರ್ಸೆಂಟೈಲ್ (563 ಅಂಕ), ಕಿಶನ್ ಶಿವಮೂರ್ತಯ್ಯ ಮಟದ್ 98.526 ಪರ್ಸೆಂಟೈಲ್ (561 ಅಂಕ), ಮಿಥುನ್ ಕೆ ಪಿ 98.487 ಪರ್ಸೆಂಟೈಲ್ (560 ಅಂಕ ), ಶ್ರೇಯಸ್ ಯು ಶಾನಭಾಗ್ 98.452 ಪರ್ಸೆಂಟೈಲ್ (559 ಅಂಕ ), ಅಂಕಿತಾ ಸರವಗೊಲ್ 98.194 ಪರ್ಸೆಂಟೈಲ್ (552 ಅಂಕ ),ಪವನ್ ಕುಮಾರ್ 98.156 ಪರ್ಸೆಂಟೈಲ್ (551 ಅಂಕ ), ಆದಿತ್ಯ ಸಿ ಪಾಟೀಲ್ 98.114ಪರ್ಸೆಂಟೈಲ್ (550 ಅಂಕ ), ಪ್ರವೀಣ್ ಹನುಮಂತ್ 97.992 ಪರ್ಸೆಂಟೈಲ್ (547 ಅಂಕ), ಭರದ್ವಾಜ್ ಪಿ ಯು 97.682 ಪರ್ಸೆಂಟೈಲ್ (540 ಅಂಕ ) , ಶ್ರೀಗೌರಿ 97.687 ಪರ್ಸೆಂಟೈಲ್ (540 ಅಂಕ ), ದಿಗಂತ್ ಬಿ ಹೆಚ್ 97.596 ಪರ್ಸೆಂಟೈಲ್(538 ಅಂಕ ), ತೇಜಸ್ ಡಿ ಎಂ 97.500 ಪರ್ಸೆಂಟೈಲ್(536), ಪುನೀತ್ ಹೆಚ್ ಡಿ 97500 ಪರ್ಸೆಂಟೈಲ್ (536 ಅಂಕ ), ಸರಸ್ವತಿ ಎಂ ಎಸ್ 97.403 ಪರ್ಸೆಂಟೈಲ್ (534 ಅಂಕ ),ಶಶಾಂಕ್ (484) ಪಡೆದು ಸಾಧನೆ ಮಾಡಿರುತ್ತಾರೆ.

600ಕ್ಕಿಂತಲೂ ಹೆಚ್ಚು ಅಂಕಗಳನ್ನು 4 ವಿದ್ಯಾರ್ಥಿಗಳು, 550 ಕ್ಕಿಂತಲೂ ಹೆಚ್ಚು ಅಂಕವನ್ನು 13 ವಿದ್ಯಾರ್ಥಿಗಳು, 500 ಕ್ಕಿಂತಲೂ ಹೆಚ್ಚು ಅಂಕಗಳನ್ನು 37 ವಿದ್ಯಾರ್ಥಿಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜು ನೀಡುತ್ತಿರುವ ಅತ್ಯುತ್ತಮ ಕೋಚಿಂಗ್ ನಿಂದ ಈ ಒಂದು ಸಾಧನೆ ಮಾಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ವರ್ಷ ಕಾಲೇಜಿನಿಂದ ಕೋಚಿಂಗ್ ಪಡೆದು ಉತ್ತಮ ಅಂಕಗಳಿಸಿದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್ ಲಭಿಸುವ ನಿರೀಕ್ಷೆ ಇದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದರು.

Related posts

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪೋಸ್ಟ್ ಪ್ರಕರಣ; ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನೆ

Suddi Udaya

ನಯನರಮ್ಯ ಧರ್ಮಸ್ಥಳ ಲಕ್ಷದೀಪೋತ್ಸದಲ್ಲಿ ಸನಾತನ ಸಂಸ್ಥೆಯ ಸಹಭಾಗ : ಡಾ. ಡಿ. ವೀರೇಂದ್ರ ಹೆಗ್ಡೆಯವರಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ

Suddi Udaya

ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Suddi Udaya

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.22 ಡಿವಿಡೆಂಡ್ ಘೋಷಣೆ

Suddi Udaya

ಬೆಳ್ತಂಗಡಿ ತಾಲೂಕಿನ ಕೃಷಿಕರಿಗೆ ರೂ. 48.28 ಕೋಟಿ ಬೆಳೆ ವಿಮೆ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya
error: Content is protected !!