July 18, 2026
ಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು – 99.977 ಪರ್ಸೆಂಟೈಲ್(672ಅಂಕ) ಪಡೆದ ಅಕ್ಷಯ್ ಡಿ.-ತಾಲೂಕಿಗೆ ಪ್ರಥಮ ಸ್ಥಾನ

ಮೂಡುಬಿದಿರೆ: ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರದೇಶ ಪರೀಕ್ಷೆ(ನೀಟ್)ಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಯಾದ ಅಕ್ಷಯ್ ಡಿ 99.977 ಪರ್ಸೆಂಟೈಲ್ (672ಅಂಕ) ಪಡೆದು ಮೂಡುಬಿದಿರೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಹಾಗೂ ಅಖಿಲ ಭಾರತ ಮಟ್ಟದಲ್ಲಿ 456 ನೇ ರ್ಯಾಂಕ್ ಮತ್ತು ಸಾಮಾನ್ಯ ವರ್ಗದಲ್ಲಿ 283 ನೇ ರ್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ:
ಶಮಂತ್ ಪಿ ಗೌಡ 99..835 ಪರ್ಸೆಂಟೈಲ್ (632 ಅಂಕ), ಪ್ರೀತಮ್ ಹೆಚ್ ಎಂ 99.690 ಪರ್ಸೆಂಟೈಲ್ (615 ಅಂಕ ), ಬಿ. ವಿನಯ್ 99.525 ಪರ್ಸೆಂಟೈಲ್ (602), ಮನ್ವಿತ್ ಎಸ್ ಪದ್ಮಶಾಲಿ 99.267 ಪರ್ಸೆಂಟೈಲ್ (588 ಅಂಕ), ಶೋಭಿತಾ ಕೆ ಸಿ 99.182 ಪರ್ಸೆಂಟೈಲ್ (584 ಅಂಕ), ಹರ್ಷಿತ ಸಿ 98.597ಪರ್ಸೆಂಟೈಲ್ (563 ಅಂಕ), ಕಿಶನ್ ಶಿವಮೂರ್ತಯ್ಯ ಮಟದ್ 98.526 ಪರ್ಸೆಂಟೈಲ್ (561 ಅಂಕ), ಮಿಥುನ್ ಕೆ ಪಿ 98.487 ಪರ್ಸೆಂಟೈಲ್ (560 ಅಂಕ ), ಶ್ರೇಯಸ್ ಯು ಶಾನಭಾಗ್ 98.452 ಪರ್ಸೆಂಟೈಲ್ (559 ಅಂಕ ), ಅಂಕಿತಾ ಸರವಗೊಲ್ 98.194 ಪರ್ಸೆಂಟೈಲ್ (552 ಅಂಕ ),ಪವನ್ ಕುಮಾರ್ 98.156 ಪರ್ಸೆಂಟೈಲ್ (551 ಅಂಕ ), ಆದಿತ್ಯ ಸಿ ಪಾಟೀಲ್ 98.114ಪರ್ಸೆಂಟೈಲ್ (550 ಅಂಕ ), ಪ್ರವೀಣ್ ಹನುಮಂತ್ 97.992 ಪರ್ಸೆಂಟೈಲ್ (547 ಅಂಕ), ಭರದ್ವಾಜ್ ಪಿ ಯು 97.682 ಪರ್ಸೆಂಟೈಲ್ (540 ಅಂಕ ) , ಶ್ರೀಗೌರಿ 97.687 ಪರ್ಸೆಂಟೈಲ್ (540 ಅಂಕ ), ದಿಗಂತ್ ಬಿ ಹೆಚ್ 97.596 ಪರ್ಸೆಂಟೈಲ್(538 ಅಂಕ ), ತೇಜಸ್ ಡಿ ಎಂ 97.500 ಪರ್ಸೆಂಟೈಲ್(536), ಪುನೀತ್ ಹೆಚ್ ಡಿ 97500 ಪರ್ಸೆಂಟೈಲ್ (536 ಅಂಕ ), ಸರಸ್ವತಿ ಎಂ ಎಸ್ 97.403 ಪರ್ಸೆಂಟೈಲ್ (534 ಅಂಕ ),ಶಶಾಂಕ್ (484) ಪಡೆದು ಸಾಧನೆ ಮಾಡಿರುತ್ತಾರೆ.

600ಕ್ಕಿಂತಲೂ ಹೆಚ್ಚು ಅಂಕಗಳನ್ನು 4 ವಿದ್ಯಾರ್ಥಿಗಳು, 550 ಕ್ಕಿಂತಲೂ ಹೆಚ್ಚು ಅಂಕವನ್ನು 13 ವಿದ್ಯಾರ್ಥಿಗಳು, 500 ಕ್ಕಿಂತಲೂ ಹೆಚ್ಚು ಅಂಕಗಳನ್ನು 37 ವಿದ್ಯಾರ್ಥಿಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜು ನೀಡುತ್ತಿರುವ ಅತ್ಯುತ್ತಮ ಕೋಚಿಂಗ್ ನಿಂದ ಈ ಒಂದು ಸಾಧನೆ ಮಾಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ವರ್ಷ ಕಾಲೇಜಿನಿಂದ ಕೋಚಿಂಗ್ ಪಡೆದು ಉತ್ತಮ ಅಂಕಗಳಿಸಿದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್ ಲಭಿಸುವ ನಿರೀಕ್ಷೆ ಇದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಕ್ಕಡ ವಲಯದಲ್ಲಿ “ಸಿರಿ” ಹೊಸ ಸಂಘ ರಚನೆ

Suddi Udaya

ಎಸ್.ಡಿ.ಎಂ ಕಾಲೇಜು (ಸ್ವಾಯತ್ತ) ಉಜಿರೆ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಗ್ರಾ.ಪಂ ಕುವೆಟ್ಟು ಇದರ ಸಹಯೋಗ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹೊಸ ಮೈಲಿಗಲ್ಲು

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೋ

Suddi Udaya

ಕೊಯ್ಯೂರು ಕೊಯಿರೊಟ್ಟು ಗುಳಿಗ ದೈವದ ನೂತನ ಕಟ್ಟೆ, ಗಗ್ಗರ ಸೇವೆ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ನೂತನ ನಿರ್ದೇಶಕರ ಪದಗ್ರಹಣ ಮತ್ತು 2025ರ ಸಾಧಕರ ಪ್ರತಿಭಾ ಪುರಸ್ಕಾರ

Suddi Udaya
error: Content is protected !!