ಬೆಳ್ತಂಗಡಿ: ಎಸ್ ವೈ ಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ಪ್ರತಿ ಸರ್ಕಲ್ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜು.17 ರಂದು ಗುರುವಾಯನಕೆರೆ ಎಸ್ ವೈ ಎಸ್ ಸರ್ಕಲ್ ವ್ಯಾಪ್ತಿಯಲ್ಲಿ ನಡೆಯಿತು.

ಗುರುವಾಯನಕೆರೆ ಪೇಟೆಯ ಸುತ್ತಮುತ್ತ ನಡೆದ ಈ ಕಾರ್ಯಕ್ರಮವು ಜನೋಪಯೋಗಿಯಾಗಿ ಸಂಪನ್ನಗೊಂಡಿತು. ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್ಯದರ್ಶಿ ರಝಾಕ್ ಸಅದಿ, ದಅವಾ ಕಾರ್ಯದರ್ಶಿ ಉಮರ್ ಹಾಜಿ, ಸಂಘಟನಾ ಕಾರ್ಯದರ್ಶಿ ಅಶ್ರಫ್, ಇಸಾಬ ಸಾಂತ್ವಾನ ಕಾರ್ಯದರ್ಶಿ ನಝೀರ್ ಕಾಂತಿಜಾಲ್, ಪರಪ್ಪು ಜಮಾಅತ್ ಕಾರ್ಯದರ್ಶಿ ಸೈಫುಲ್ಲಾ, ಎಸ್ ಎಸ್ ಎಫ್ ಡಿವಿಶನ್ ಅಧ್ಯಕ್ಷ ಇಸಾಕ್ ಮೊದಲಾದವರು ನೇತೃತ್ವ ವಹಿಸಿದ್ದರು.
ಸರ್ಕಲ್ ಸಮಿತಿ ನಾಯಕರು, ಯೂನಿಟ್ ನಾಯಕರು ಹಾಗೂ ಕಾರ್ಯಕರ್ತರು ಸಹಕರಿಸಿದರು. ಗುರುವಾಯನಕೆರೆ ಮುಖ್ಯ ಪೇಟೆಯ ಪ್ರಮುಖ ಕಡೆಗಳಲ್ಲಿ ಗಿಡಗಂಟಿ ತೆರವು, ಪ್ಲಾಸ್ಟಿಕ್ ತೆರವು ಹಾಗೂ ಇತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.















