ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕ್ಲಬ್ ನ ಗೌರವ ಸದಸ್ಯರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ರಘುರಾಮ ಶೆಟ್ಟಿ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ ಕೆ, ಸದಸ್ಯರುಗಳಾದ ಜಯಂತ ಶೆಟ್ಟಿ , ರಾಜು ಶೆಟ್ಟಿ , ವಸಂತ ಶೆಟ್ಟಿ ಶ್ರದ್ದಾ, ಹೇಮಂತ ರಾವ್, ಧರಣೇಂದ್ರ ಕೆ ಜೈನ್, ಆಶ್ರಫ್ ಅಲಿ, ರಾಮಕೃಷ್ಣ ಗೌಡ, ಕೃಷ್ಣಾಚಾರ್, ತಂಗಚ್ಚನ್, ಪ್ರಭಾಕರ ಗೌಡ ಬೊಲ್ಮಾ, ರವೀಂದ್ರ ಶೆಟ್ಟಿ ಬಳೆಂಜ, ವಿನ್ಸೆಂಟ್ ಟಿ ಡಿಸೋಜ, ಪ್ರಕಾಶ್ ಶೆಟ್ಟಿ ನೊಚ್ಚ, ಭುಜಬಲಿ ಮೊದಲಾದವರು ಉಪಸ್ಥಿತರಿದ್ದರು.















