ಅಳದಂಗಡಿ ಗ್ರಾಮ ಪಂಚಾಯತ್ ನ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿ ರಚನೆ ಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಇವರ ಅಧ್ಯಕ್ಷತೆಯಲ್ಲಿ ಜು.26ರಂದು ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನಡೆಸಲಾಯಿತು.

ಅಳದಂಗಡಿ ಗ್ರಾಮ ಪಂಚಾಯತ್ ಯ ಹಿಂದೂ ರುದ್ರ ಭೂಮಿ ರಚನಾ ಸಮಿತಿ ಯ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಕೊಡಂಗೆ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಉಂಗಿಲಬೈಲು, ಖಜಾಂಜಿ ಯಾಗಿ ಆನಂದ ಪಿಲ್ಯ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜೆ ಪಿ ಡಿ ಓ, ಉಪಕಾರ್ಯದರ್ಶಿಯಾಗಿ ಸದಾಶಿವ ಸುಲ್ಕೆರಿಮೋಗ್ರು, ಗೌರವಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ, ಗೌರವ ಸಲಹೆಗರರಾಗಿ ಯಶೋಧ ಎಸ್.ಕೆ.ಡಿ.ಆರ್.ಡಿ.ಪಿ ಮೇಲ್ವಿಚಾರಕರು, ಶಿವಪ್ಪ ಪೂಜಾರಿ, ಸದಾಶಿವ ಶೆಟ್ಟಿ, ಶ್ರೀನಿವಾಸ್ ದೋರಿಂಜಾ ಹಾಗೂ 3 ಗ್ರಾಮ ಗಳ ಗ್ರಾಮಸ್ಥರ ನ್ನು ಒಳಗೊಂಡ 40 ಸದಸ್ಯರ ಸಮಿತಿ ರಚನೆ ಮಾಡಲಾಯಿತು.
ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರವಿ ಕುಮಾರ್ ಮತ್ತು ಗಣೇಶ್ ಉಪಸ್ತಿತರಿದ್ದರು.
















