ನಾವೂರು: ನವೋದಯ ಯುವಕ ಮಂಡಲ ನಾವೂರು ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ “ಆಟಿ ಸುಗಿಪು” ಸಾಂಪ್ರದಾಯಿಕ ಆಟಿ (ಪಾಲೆದ) ಕಷಾಯ ಹಾಗೂ ರುಚಿಕರ ತಜೆಂಕ್ ದೋಸೆ ವಿತರಣಾ ಕಾರ್ಯಕ್ರಮ ಇಂದು(ಆ.12) ನಾವೂರು ಪೇಟೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಡಾ| ಪ್ರದೀಪ್ ನಾವೂರು, ನವೋದಯ ಯುವಕ ಮಂಡಲದ ಅಧ್ಯಕ್ಷ ಸ್ವರೂಪ್ ಶೇಖರ್, ಕಾರ್ಯದರ್ಶಿ ಪ್ರದೀಪ್ ಗೌಡ ನಾಗಾಜೆ, ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕಾರಿಂಜಾ, ಧರ್ಣಪ್ಪ ಮೂಲ್ಯ, ಶುಭಕರ ಮುಲಿಪಡಪು, ಬಾಲಕೃಷ್ಣ ಆಚಾರಿ, ಅಜಿತ್ ಕೋಟ್ಯಾನ್, ಲಕ್ಷೀಶ ಕುಲಾಲ್, ರಂಜಿತ್ ಕಿರ್ನಡ್ಕ, ಕೃಷ್ಣಪ್ಪ ಬೊಂಟ್ರ ಪಾಲು, ಗಣೇಶ್ ಗೌಡ ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಊರವರು ಬಂದು ಆಟಿ ಕಷಾಯ ಹಾಗೂ ತಜೆಂಕ್ ದೋಸೆಯನ್ನು ಸವಿದರು.













