ಬೆಳ್ತಂಗಡಿ: ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಕಕ್ಕಿಂಜೆ ಶೋರೂಮ್ನಲ್ಲಿ ನೂತನ ಬ್ರೆಝಾ ಕಾರನ್ನು ಆ.11ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಕಾರಿನ ಬಿಡುಗಡೆ ಬಳಿಕ ನೂತನ ಬ್ರೆಝಾದಲ್ಲಿ ಅಳವಡಿಸಲಾಗಿರುವ ಆಧುನಿಕ ತಂತ್ರಜ್ಞಾನ, ಸಾಮರ್ಥ್ಯ, ರಸ್ತೆ ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ವಿವಿಧ ವಿಶೇಷತೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಂಡೋವಿ ಮೋಟಾರ್ಸ್ ಸೇಲ್ಸ್ ವಿಭಾಗದ ಜಿಎಂ ಶಶಿಧರ ಕಾರಂತ್, ಎಸ್ಸಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ವಿವೇಕ್ ಜೈನ್, ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್, ವಿ& ವಿ ಸಂಸ್ಥೆಯ ಮುಖ್ಯಸ್ಥರಾದ ಬಾಬುರಾಜ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ರಾಜೇಶ್, ಉಪನ್ಯಾಸಕ ಜೋಸೆಫ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಂಸ್ಥೆಯ ಸೇವೆ ಹಾಗೂ ನೂತನ ಕಾರಿನ ಕುರಿತು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಬ್ರೆಝಾ ಕಾರಿನ ಕೀಲಿಯನ್ನು ಮಹಮ್ಮದ್ ಸಫಾನ್, ಶಾಜಿ ಜೋಸೆಫ್ ಹಾಗೂ ಹಾರಿಸ್ ಅವರಿಗೆ ಹಸ್ತಾಂತರಿಸಲಾಯಿತು.
ಸಹಾಯಕ ಸೇಲ್ಸ್ ಮ್ಯಾನೇಜರ್ ಸುಜಿತ್ ಸ್ವಾಗತಿಸಿದರು. ಟೀಮ್ ಮ್ಯಾನೇಜರ್ ಚರಣ್ ಕುಮಾರ್ ವಂದಿಸಿದರು. ನವೀನ್ ಕುಮಾರ್, ಸಾಬು ಜೋಸೆಫ್, ಡೇಸಿಕ್, ಬಾಷಾ, ಲತೇಶ್ ಬಳಂಜ ಹಾಗೂ ಇನ್ನಿತರರು ಸಹಕರಿಸಿದರು.













