ಬೆಳ್ತಂಗಡಿ : ಕೆರೆ ಹಾವನ್ನು ಅಟ್ಟಿಸಿಕೊಂಡು ಮನೆಯ ಅಂಗಳಕ್ಕೆ ಬಂದಿದ್ದ ಕಾಳಿಂಗ ಸರ್ಪವನ್ನು ಲಾಯಿಲದ ಸ್ನೇಕ್ ಅಶೋಕ್ ಸೆರೆ ಹಿಡಿದಿದ್ದಾರೆ.
ಆ.16 ರಂದು ಬೆಳಿಗ್ಗೆ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ವಿಶ್ವನಾಥ ಎಂಬುವರ ಮನೆಯಂಗಳಕ್ಕೆ ಕೆರೆ ಹಾವುನ್ನು ಓಡಿಸಿಕೊಂಡು ಕಾಳಿಂಗ ಬಂದಿರುವುದನ್ನು ಗಮನಿಸಿ ಸ್ನೇಕ್ ಅಶೋಕ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಸುಮಾರು 12 ಅಡಿ ಉದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಸೇರಿಸಿದ್ದಾರೆ. ಆ.14 ರಂದು ಕಿಲ್ಲೂರಿನ ಕೃಷಿ ತೋಟದಲ್ಲಿದ್ದ 12 ಅಡಿಯ ಕಾಳಿಂಗ ಹಾವುನ್ನು ಹಿಡಿದಿದ್ದರು.












