ಮಿತ್ತಬಾಗಿಲು: ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಕಾರ್ಯಕ್ರಮಗಳು ಸಡಗರದಿಂದ ಜರಗಿತು.
ಬೆಳಗ್ಗಿನಿಂದಲೇ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಶ್ರದ್ಧಾ ಭಕ್ತಿಯಿಂದ ತೀರ್ಥಸ್ನಾನ ಮಾಡಿದರು. ಭಕ್ತಾದಿಗಳಿಗೆ ನಿರಂತರ ಫಲಾಹಾರದ ವ್ಯವಸ್ಥೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯು ನಡೆಯಿತು. ಅರ್ಚಕರಾಗಿ ರವಿಕಿರಣ್ ಭಟ್, ಹಾಗೂ ಸಹಾಯಕರಾಗಿ ಗುರುರಾಜ ಭಟ್, ವಾಸುದೇವ ರಾವ್ ಕುಕ್ಕಾವು ಸಹಕರಿಸಿದರು. ಅಲ್ಲದೆ ಅನೇಕ ಭಕ್ತಾದಿಗಳು ಸ್ವಯಂಸೇವಕರಾಗಿ ಸೇವೆಗೈದರು.
ವರದಿ: ವಾಸುದೇವ ರಾವ್ ಕಕ್ಕೆನೇಜಿ












