
ಬೆಳ್ತಂಗಡಿ: ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ ಹತ್ತನೇ ಬಾರಿಗೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿಗೆ ಸಾಧನ ಪ್ರಶಸ್ತಿ ಪ್ರಧಾನ.
ಈ ಪ್ರಶಸ್ತಿಯನ್ನು ಅಧ್ಯಕ್ಷರ ಪರವಾಗಿ ಸಂಘದ ವಿಶೇಷಾಧಿಕಾರಿ ಶ್ರೀ ಮೋನಪ್ಪ ಪೂಜಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ಉಪಸ್ಥಿತರಿದ್ದರು. ಪ್ರಶಸ್ತಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ. ಡಾ.ಎಂ ಎನ್ ರಾಜೇಂದ್ರ ಕುಮಾರ್ ನೀಡಿದರು. ಉಪಾಧ್ಯನಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಾಸ್ಕರ ಕೋಟ್ಯಾನ್ ಕೊಳಕೆಬೈಲು, ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಪೂಜಾರಿ ಎಕ್ಕಾರು , ಎಸ್ ಬಿ ಜಯರಾಮ್ ರೈ, ಎಸ್ ಎನ್ ಮನ್ಮಥ, ಸಹಕಾರ ಸಂಘಗಳು ಮಂಗಳೂರು ಉಪನಿಬಂಧಕರಾದ ರಮೇಶ್ ಎಚ್ ಎನ್ ಉಪಸ್ಥಿತರಿದ್ದರು.











