ಗೇರುಕಟ್ಟೆ: ಇಲ್ಲಿಯ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ಮತ್ತು ಪಾಲಿ ಕ್ಲಿನಿಕ್ ಇದರ ಉದ್ಘಾಟನೆ ಯನ್ನು ಊರಿನ ಗಣ್ಯರಾದ ಸದಾಶಿವ ರೈ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

ಡಾ. ಕಾರ್ತಿಕ್ ಶುಭ ಹಾರೈಸಿದರು. ಮಾಲಕರಾದ ಶಿತಿಕಂಠ ಭಟ್ ವಂದಿಸಿದರು.
ಕ್ಲಿನಿಕ್ ನಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಡಾ. ಕಾರ್ತಿಕ್ (ಫಿಜಿಷಿಯನ್ ), ಪ್ರತಿ ಮಂಗಳವಾರ ಡಾ. ಶತಾನಂದ ಪ್ರಸಾದ್ (ಖ್ಯಾತ ಎಲುಬು ರೋಗ ತಜ್ಞರು ) ಮತ್ತು ಪ್ರತಿ ಗುರುವಾರ ಡಾ. ನವ್ಯಾ ಭಟ್ (ಖ್ಯಾತ ಸ್ತ್ರೀ ರೋಗ ತಜ್ಞರು )ಸೇವೆಗೆ ಲಭ್ಯರಿರುತ್ತಾರೆ. ಅಲ್ಲದೆ ಎಲ್ಲಾ ಬಗೆಯ ರಕ್ತ ಪರೀಕ್ಷೆ, ECG, ನೆಬುಲೈಜರ್ ಸೌಲಭ್ಯ ಗಳು ಕೂಡ ಲಭ್ಯ ವಿದೆ.











