ಮಡoತ್ಯಾರು: 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ವತಿಯಿಂದ ಆಯೋಜಿಸಿದ ಸ್ವಾತಂತ್ರೋತ್ಸವ 2026 ಕಾರ್ಯಕ್ರಮವು ಅ 23 ರoದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತೆಯಾಗಿರುವ ಭರತನಾಟ್ಯ ಮತ್ತು ಯಕ್ಷಗಾನ ಗಮನಾರ್ವ ಸಾಧನೆ ಮಾಡಿದ ಮಡoತ್ಯಾರಿನ ಕು ಶಾನ್ವಿ ಪೂಜಾರಿ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕರಾಟೆ ಪಟುವಾಗಿ ಗುರುತಿಸಿರುವ ಶ್ರೇಯಸ್ ಪೂಜಾರಿ ಮಡoತ್ಯಾರು ಅವರು ರಾಷ್ಟ್ರೀಯ ಪ್ರಶಸ್ತಿ ಪ್ರತಿಭಾ ಪುರಸ್ಕಾರ ಪಡೆದಿರುತ್ತಾರೆ.
ದೇಶಭಕ್ತಿ ಸೇವೆ ಶಿಕ್ಷಣ ವಿವಿಧ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಡಂತ್ಯಾರಿನ ಈ ಇಬ್ಬರು ಪ್ರತಿಭೆಗಳಿಗೆ ದೊರೆತ ಗೌರವವು ಸ್ಥಳೀಯವಾಗಿ ಹೆಮ್ಮೆ ಪಡುವಂತಾಗಿದೆ.











