ಕೊಕ್ಕಡ : ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ನೀಲೇಶ್ವರ ಎಡಮನೆ ಬ್ರಹ್ಮಶ್ರೀ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ಮಹಾಗಣಪತಿ, ಶ್ರೀ ಉಳ್ಳಾಲ್ತಿ ಅಮ್ಮ ಶ್ರೀ ನೀಲಕಂಠ ಹಾಗೂ ಶ್ರೀ ಶಾಸ್ತಾರ ದೇವರ ನೂತನ ಗರ್ಭಗುಡಿಗಳ ಶಿಲಾನ್ಯಾಸವು ನಾಳೆ (ಆ. 27) ಜರುಗಲಿದೆ.
ವಾಸ್ತುಶಿಲ್ಪಿ ಎಸ್. ಎಮ್. ಪ್ರಸಾದ್ ಮುನಿಯಂಗಳ ಶ್ರೀ ವಿಷ್ಣುಮೂರ್ತಿ ದೇವರ ಗರ್ಭಗುಡಿಗೆ, ಬೆಂಗಳೂರು ಎಚ್. ಲಕ್ಷ್ಮೀ ನಾರಾಯಣ ತೋಡ್ತಿಲ್ಲಾಯ ಶ್ರೀ ಗಣಪತಿ ದೇವರ ಗರ್ಭಗುಡಿಗೆ, ರಾಘವ ಪೂಜಾರಿ ಕೊಲ್ಲಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ಗರ್ಭಗುಡಿಗೆ, ಶ್ರೀ ಕ್ಷೇತ್ರ ಕದ್ರಿ ಮಂಗಳೂರಿನ ಪ್ರಧಾನ ಅರ್ಚಕ ಚತುರ್ವೇದಿ ಡಾ. ಪ್ರಭಾಕರ ಅಡಿಗ ಶ್ರೀ ನೀಲಕಂಠ ದೇವರ ಗರ್ಭಗುಡಿಗೆ, ಶ್ರೀ ಕ್ಷೇತ್ರ ಸೌತಡ್ಕದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶ್ರೀ ಶಾಸ್ತಾರ ದೇವರ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.











