August 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ

ಕೊಕ್ಕಡ: ಇಲ್ಲಿಯ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಆ.27ರಂದು ನಡೆಯಿತು.

ದೇವಳದ ತಂತ್ರಿಗಳಾದ ನೀಲೇಶ್ವರ ಎಡಮನೆ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಶಿಲಾಪೂಜೆಯನ್ನು ನೆರವೇರಿಸಿದರು. ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಇವರು ವಿಷ್ಣುಮೂರ್ತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಕದ್ರಿ ಮಂಜುನಾಥ ದೇವರ ಅರ್ಚಕರಾದ ಚತುರ್ವೇದಿ ಪ್ರಭಾಕರ ಅಡಿಗರು ನೀಲಕಂಠ ದೇವರ ಗುಡಿಯ ಶಿಲಾನ್ಯಾಸವನ್ನೂ, ಬಿಲ್ಲವ ಮುಖಂಡ ರಾಘವ ಪೂಜಾರಿ ಕೊಲ್ಲಾಜೆ ಉಳ್ಳಾಳ್ತಿ ದೇವಿಯ ಗುಡಿಯ ಶಿಲಾನ್ಯಾಸವನ್ನೂ, ಲಕ್ಮೀನಾರಾಯಣ ತೋಡ್ತಿಲ್ಲಾಯ ಗಣಪತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಸೌತಡ್ಕ ಮಹಾಗಣಪತಿ ದೇಗುಲದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಶಾಸ್ತಾರ ಗುಡಿಯ ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಅರ್ಚಕ ರಮಾನಂದ ಭಟ್, ಬಾಲಕೃಷ್ಣ ಕೆದಿಲಾಯ, ಸುಬ್ರಹ್ಮಣ್ಯ ಉಪ್ಪಾರ್ಣ, ಸುಬ್ರಹ್ಮಣ್ಯ ತೋಡ್ತಿಲ್ಲಾಯ ಕುಶಾಲಪ್ಪ ಗೌಡ ಪೂವಾಜೆ, ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಯರಾಮ ನೆಲ್ಲಿತ್ತಾಯ, ಕುಶಾಲಪ್ಪಗೌಡ ಪುಡಿಕೆತ್ತೂರು, ಡಾ.ಮೋಹನದಾಸ ಗೌಡ, ರಮೇಶ ಯಡಪಡಿತ್ತಾಯ ಕೊಡಂಕಿರಿ, ಜೀರ್ಣೋಧ್ದಾರ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಸದಸ್ಯರು, ಊರಿನ, ಸೀಮೆಯ ಭಕ್ತರು ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಪವರ್ ಆನ್ ಸಂಸ್ಥೆಗೆ ದಶಕದ ಸಂಭ್ರಮ: ಕೇಕ್ ಕತ್ತರಿಸಿ ಸಂಭ್ರಮಾಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗಂಡಿಬಾಗಿಲು ಸಿಯೋನ್ ಅಶ್ರಮಕ್ಕೆ ಭೇಟಿ

Suddi Udaya

ಗೇರುಕಟ್ಟೆ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಾನುವಾರು ಆರೋಗ್ಯ ಮಾಹಿತಿ ಶಿಬಿರ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿಯ ಓಟಕ್ಕೆ ಒಲಿದ ಪ್ರತಿಷ್ಠಿತ ಗಾಂಧಿ ಪುರಸ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್,ಸಚಿವ ಪ್ರಿಯಾಂಕ್ ಖರ್ಗೆರವರಿಂದ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವಿದ್ಯಾರ್ಥಿಗಳಿಗೆ ರೂ. 25.5 ಲಕ್ಷ ಸ್ಕಾಲರ್ ಶಿಫ್ ನೀಡಿ ರೋಟರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ: ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಗವರ್ನರ್ ರೋ| ವಿಕ್ರಂ ದತ್ತಾ ಪ್ರಶಂಸೆ

Suddi Udaya

ಕಿಲ್ಲೂರು ನಿವಾಸಿ ಗೀತಾ ಹೋಟೆಲ್ ಮಾಲಕ ಶಿವಾನಂದ ಪೂಜಾರಿ ನಿಧನ

Suddi Udaya
error: Content is protected !!