August 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ

ಕೊಕ್ಕಡ: ಇಲ್ಲಿಯ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಆ.27ರಂದು ನಡೆಯಿತು.

ದೇವಳದ ತಂತ್ರಿಗಳಾದ ನೀಲೇಶ್ವರ ಎಡಮನೆ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಶಿಲಾಪೂಜೆಯನ್ನು ನೆರವೇರಿಸಿದರು. ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಇವರು ವಿಷ್ಣುಮೂರ್ತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಕದ್ರಿ ಮಂಜುನಾಥ ದೇವರ ಅರ್ಚಕರಾದ ಚತುರ್ವೇದಿ ಪ್ರಭಾಕರ ಅಡಿಗರು ನೀಲಕಂಠ ದೇವರ ಗುಡಿಯ ಶಿಲಾನ್ಯಾಸವನ್ನೂ, ಬಿಲ್ಲವ ಮುಖಂಡ ರಾಘವ ಪೂಜಾರಿ ಕೊಲ್ಲಾಜೆ ಉಳ್ಳಾಳ್ತಿ ದೇವಿಯ ಗುಡಿಯ ಶಿಲಾನ್ಯಾಸವನ್ನೂ, ಲಕ್ಮೀನಾರಾಯಣ ತೋಡ್ತಿಲ್ಲಾಯ ಗಣಪತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಸೌತಡ್ಕ ಮಹಾಗಣಪತಿ ದೇಗುಲದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಶಾಸ್ತಾರ ಗುಡಿಯ ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಅರ್ಚಕ ರಮಾನಂದ ಭಟ್, ಬಾಲಕೃಷ್ಣ ಕೆದಿಲಾಯ, ಸುಬ್ರಹ್ಮಣ್ಯ ಉಪ್ಪಾರ್ಣ, ಸುಬ್ರಹ್ಮಣ್ಯ ತೋಡ್ತಿಲ್ಲಾಯ ಕುಶಾಲಪ್ಪ ಗೌಡ ಪೂವಾಜೆ, ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಯರಾಮ ನೆಲ್ಲಿತ್ತಾಯ, ಕುಶಾಲಪ್ಪಗೌಡ ಪುಡಿಕೆತ್ತೂರು, ಡಾ.ಮೋಹನದಾಸ ಗೌಡ, ರಮೇಶ ಯಡಪಡಿತ್ತಾಯ ಕೊಡಂಕಿರಿ, ಜೀರ್ಣೋಧ್ದಾರ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಸದಸ್ಯರು, ಊರಿನ, ಸೀಮೆಯ ಭಕ್ತರು ಭಾಗವಹಿಸಿದ್ದರು.

Related posts

ಎಸ್‌ಜಿಎಫ್‌ಐ (SGFI) ರಾಷ್ಟ್ರೀಯ ಕಬಡ್ಡಿ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ತಂಡ ಭಾಗಿ

Suddi Udaya

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದಿಂದ ಸಾವಿರಾರು ಜನರ ಸಮ್ಮುಖದಲ್ಲಿ, ವಿಜೃಂಭಣೆಯ “ಗುರು ವಂದನೆ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಶೇಂದಿ ತೆಗೆಯುವ ವೇಳೆ ವ್ಯಕ್ತಿ ಮರದಿಂದ ಬಿದ್ದು ಸಾವು

Suddi Udaya

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

Suddi Udaya

ಗಾಳಿ ಮಳೆ: ಕುತ್ಲೂರು ಅರಸ್ ಕಟ್ಟೆಯಲ್ಲಿ ಮರ, ವಿದ್ಯುತ್ ಕಂಬ ಬಿದ್ದು ಹಾನಿ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

Suddi Udaya
error: Content is protected !!