28.9 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಕ್ಷಾಬಂಧನ – ವರಮಹಾಲಕ್ಷ್ಮೀ ಪೂಜೆ

ಬೆಳ್ತಂಗಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ತುಮಕೂರು, ನೇತ್ರಾವತಿ ವಲಯ, ಬೆಳ್ತಂಗಡಿ ಶಾಖೆಯ ಆತಿಥ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನ ಕಾರ್ಯಕ್ರಮವು ಭಕ್ತಿಭಾವ, ಆತ್ಮೀಯತೆ ಹಾಗೂ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ದೇವಿಯ ಪೂಜೆ, ರಕ್ಷಾಬಂಧನ ಆಚರಣೆ, ಬೌದ್ಧಿಕ ಹಾಗೂ ಪ್ರಸಾದ ವಿತರಣೆ ನಡೆಯಿತು. ಅಳದಂಗಡಿ ಹಾಗೂ ಬೆಳ್ತಂಗಡಿ ಶಾಖೆಯ ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ಭಾವವನ್ನು ಹಂಚಿಕೊಂಡರು.

ರಕ್ಷಾಬಂಧನದ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಕುರಿತು ಅಳದಂಗಡಿ ಶಾಖೆಯ ಯೋಗ ಬಂಧು ಎಂ.ಕೆ ಪ್ರಸಾದ್ ಇವರು ಅರ್ಥಪೂರ್ಣ ಬೌದ್ಧಿಕ ನೀಡಿದರು. ಅವರ ವಿಚಾರಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರೇರಣಾದಾಯಕವಾಗಿದ್ದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉಮಾ ರಾವ್ ಅವರು ಉಪಸ್ಥಿತರಿದ್ದರು.

ಸಮಿತಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪ್ರೇಮಲತಾ, ಸಹ ಶಿಕ್ಷಕರಾದ ಸಂತೋಷ್ ಕಾಪಿನಾಡ್ಕ, ಶ್ರೀಮತಿ ಕೋಮಲ ಹಾಗೂ ಶ್ರೀಮತಿ ಶಶಿಕಲಾ, ಶಾಖೆಯ ಸಂಚಾಲಕರಾದ ಶ್ರೀ ವಸಂತ ಕೆಂಬರ್ಜೆ ಸೇರಿದಂತೆ ಹಲವು ಯೋಗ ಬಂಧುಗಳು ಉಪಸ್ಥಿತರಿದ್ದರು. ಯೋಗ ಬಂಧು ಅಶ್ವತ್ಥ್ ಕುಮಾರ್ ಅವರು ಸ್ವಾಗತಿಸಿದರು. ಗೀತಾಪ್ರಕಾಶ್ ಅವರು ವಂದಿಸಿದರು.

Related posts

ಉಜಿರೆಯಲ್ಲಿ ರೈತ ಉತ್ಪಾದಕರ ಕಂಪನಿ ಉದ್ಘಾಟನೆ ಹಾಗೂ ಷೇರು ಪ್ರಮಾಣ ಪತ್ರ  ವಿತರಣೆ

Suddi Udaya

ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್ ಮಾರುತಿ ಸುಜುಕಿ ಶೋರೂಮ್ ನಲ್ಲಿ ನ್ಯೂ ಬ್ರೆಝಾ ಮಾರುಕಟ್ಟೆಗೆ

Suddi Udaya

ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠ್ಠಲ ಮಂದಿರಕ್ಕೆ ಲೋಕೋಪಯೋಗಿ ಸಚಿವರ ಭೇಟಿ

Suddi Udaya

ಪುದುವೆಟ್ಟು: ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ

Suddi Udaya

ಡಿಸಿ ಮನ್ನಾ ಜಮೀನು ಹಂಚಿಕೆ,: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹಾಗೂ ಸಚಿವ ಯು.ಟಿ ಖಾದರ್ ರವರನ್ನು ಭೇಟಿಯಾದ ದಲಿತ ನಾಯಕರು

Suddi Udaya

ಜು.28: ಬೆಳ್ತಂಗಡಿ ತುಳುನಾಡ ಒಕ್ಕೂಟದ ವತಿಯಿಂದ ಚೆನ್ನೆಮಣೆ ಗೊಬ್ಬು ಹಾಗೂ ಸಂಧಿ ಪಾರ್ದನ ಸುಗ್ಗಿಪು

Suddi Udaya
error: Content is protected !!