ಬೆಳ್ತಂಗಡಿ : ಭಾರತ್ ಆಟೋ ಕಾರ್ಸ್ ಶೋರೂಮ್ ನಲ್ಲಿ ಆ. 5 ರಂದು ನ್ಯೂ ಬ್ರೆಝಾ ಕಾರು ರನ್ನು ಸುದ್ದಿ ಉದಯ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ , ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ತುಕಾರಾಮ ಮತ್ತು ಎಸ್ ಡಿ ಎಮ್ ಕಾಲೇಜಿನ ಪ್ರೊಫೆಸರ್ ಡಾ. ಅತುಲ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸೇಲ್ಸ್ ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜ್ ಶ್ರೀಮಂದಾರ, ಸರ್ವಿಸ್ ಮ್ಯಾನೇಜರ್ ಶ್ರೀಗಣೇಶ್ , ಟ್ರೂ ವ್ಯಾಲ್ಯೂ ಇಂಚಾರ್ಜ್ ಪ್ರವೀಣ್ ಕುಮಾರ್ ಹೆಚ್.ಎಸ್, ಉಜಿರೆಯ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮಹಮ್ಮದ್ ಆಸೀಫ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಆಸೀಫ್ ನ್ಯೂ ಕಾರಿನ ಬಗ್ಗೆ ವಿವರಿಸಿದರು. ಶ್ರೀಮಂದಾರ ಸ್ವಾಗತಿಸಿ. ರಕ್ಷಿತ್ ಧನ್ಯವಾದವಿತ್ತರು.













