September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನಾರಾವಿ ಅಂಗನವಾಡಿ ಶಿಕ್ಷಕಿ ಸುಮಿತ್ರಾ ರವರಿಗೆ ಬೀಳ್ಕೊಡುಗೆ

ನಾರಾವಿ: ಮಕ್ಕಳ ಪಾಲನೆ, ಪೋಷಣೆ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ 42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಗನವಾಡಿ ಶಿಕ್ಷಕಿ ಸುಮಿತ್ರಾ ರವರ ವಿದಾಯ ಸಮಾರಂಭವು ನಾರಾವಿ ವಲಯದ ಅಂಗನವಾಡಿ ಶಿಕ್ಷಕಿಯರ ವತಿಯಿಂದ ಗೌರವಪೂರ್ವಕವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಪ್ರಿಯ ಆಗ್ನೇಸ್ ವಹಿಸಿದರು. ಮುಖ್ಯ ಅತಿಥಿಯಾಗಿ ವಲಯದ ಮೇಲ್ವಿಚಾರಕಿ ಕಾತ್ಯಾಯಿನಿ, ತಾಲೂಕು ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ಗಾಯತ್ರಿದೇವಿ, ನಿವೃತ್ತ ಸನ್ಮಾನವನ್ನು ಸ್ವೀಕರಿಸುವ ಶಿಕ್ಷಕಿ ಸುಮಿತ್ರ ಭಾಗವಹಿಸಿದರು.

ಸೀತಮ್ಮ ಪ್ರಾರ್ಥಿಸಿ, ತಾಲೂಕು ಅಂಗನವಾಡಿ ಸಂಘಟನೆಯ ಕಾರ್ಯದರ್ಶಿ ಅರುಣ ಕುಮಾರಿ ಬಿ ರವರು ಸನ್ಮಾನ ಪತ್ರ ಓದಿ. ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಸ್ವಾಗತಿಸಿದರು. ಗಾಯತ್ರಿದೇವಿ, ಜಯಲಕ್ಷ್ಮೀ, ದೇವಿ, ಮೀನಾ, ಲಲಿತಾ ರವರು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಾರಾವಿ ವಲಯದ ಎಲ್ಲಾ ಶಿಕ್ಷಕಿಯರು ಭಾಗವಹಿಸಿ , ಅಭಿನಂದನೆ ಸಲ್ಲಿಸಿ, ನಿವೃತ್ತ ಜೀವನಕ್ಕೆ ಶುಭಹಾರೈಸಿ ಬೀಳ್ಕೊಟ್ಟರು. ಶಿಕ್ಷಕಿ ಅನುಜ್ಞಾ ವಂದಿಸಿದರು.

Related posts

ರಾಷ್ಟ್ರ ಮುದ್ರೆಯನ್ನು ಅತೀ ಚಿಕ್ಕ ಅಳತೆಯಲ್ಲಿ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಮೆಡಿಕಲ್ ವಿದ್ಯಾರ್ಥಿನಿ ಅಪೇಕ್ಷ ಎನ್.ಎಸ್ ಉಜಿರೆ

Suddi Udaya

ಕಲ್ಲಾಜೆ ನವ ಭಾರತ್ ಗೆಳೆಯರ ಬಳಗದ ವಾರ್ಷಿಕ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಇಂದು (ಎ.12): ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ : ಹನುಮೋತ್ಸವ-2025, ಹನುಮ ಮಹಾಯಾಗ-ಕನ್ಯಾಡಿ ಶ್ರೀಗಳಿಗೆ ಮಹಾಭಿವಂದ್ಯ, ಹನುಮ ಶ್ರೀರಕ್ಷೆ ಧಾರಣೆ-ಲಂಕಾದಹನ

Suddi Udaya

ಬಿಜೆಪಿ ಪಿಲ್ಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಆನಂದ ಪಿ ., ಕಾರ್ಯದರ್ಶಿಯಾಗಿ ಉಮೇಶ್

Suddi Udaya

ಸಿವಿಲ್ ಇಂಜಿನಿಯರಿಂಗ್ ನಲ್ಲಿ ನ್ಯಾಯತರ್ಫುವಿನ ಮೋಹಿನಿ ಹೆಚ್ ರವರಿಗೆ ಚಿನ್ನದ ಪದಕ

Suddi Udaya

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya
error: Content is protected !!