ಕೊಯ್ಯೂರು: ಬೆಳಿಗ್ಗೆ ಮನೆಯಿಂದ ಬೈಕ್ ನಲ್ಲಿ ಹೊರಟ ಪ್ರವೀಣ್ ರವರು ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಆ. 22 ರಂದು ನಡೆದಿದೆ.
ತಂದೆ ಸಂಜೀವ ಗೌಡರವರ ದೂರಿನಂತೆ ಕೊಯ್ಯೂರು ನಾನಿಲ್ದಡಿ ನಿವಾಸಿ ಪ್ರವೀಣ್ (40ವ) ಎಂಬುವವರು ಚಾಲಕ ಕೆಲಸ ಮಾಡಿಕೊಂಡಿದ್ದು ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಎಂದಿನಂತೆ ಆ.22ರಂದು ಬೆಳಿಗ್ಗೆ ಮನೆಯಿಂದ ಮನೆಯಲ್ಲಿ ಸಿಸಿ ಕ್ಯಾಮಾರ, ಆದರ ಡಿವಿಆರ್ ನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಆತನ ಬೈಕ್ ನಲ್ಲಿ ಹೋದವನು ವಾಪಸ್ಸು ಮನೆಗೆ ಬಾರದೇ , ಇನ್ನು ಆತನ ಬಗ್ಗೆ, ಸಂಬಂಧಿಕರಲ್ಲಿ ನೆರೆಮನೆಯವರಲ್ಲಿ ವಿಚಾರಿಸಿ ಹುಡುಕಾಡಿದರೂ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಯುವಕನ ಬಗ್ಗೆ ಎಲ್ಲಿಯಾದರೂ ತಿಳಿದುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08256-232093 ಅಥವಾ 9480805370 ಸಂಪರ್ಕಿಸುವಂತೆ ತಿಳಿಸಲಾಗಿದೆ.











