September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುಲ್ಕೇರಿಮೊಗ್ರು ಹಿಂದೂ ಯುವ ಸೇನೆ ಸೇವಾ ಸಂಘದ ಲೋಗೋ ಬಿಡುಗಡೆ ಹಾಗೂ ಸೇವಾ ರಸೀದಿ ಬಿಡುಗಡೆ ಕಾರ್ಯಕ್ರಮ

ಸುಲ್ಕೇರಿಮೊಗ್ರು: ಹಿಂದೂ ಯುವ ಸೇನೆ ಸೇವಾ ಸಂಘ ಸುಲ್ಕೇರಿಮೊಗ್ರು, ಇದರ ಲೋಗೋ ಬಿಡುಗಡೆ ಹಾಗೂ ಸೇವಾ ರಸೀದಿ ಬಿಡುಗಡೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ಅಶ್ವಥ್ ಸಾಲ್ಯಾನ್ ವರ್ಪಾಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಹಿಂದೂ ಯುವ ಸೇನೆ ಸೇವಾ ಸಂಘದ ಲೋಗೋ ಬಿಡುಗಡೆ ಮಾಡಿದರು ಹಾಗೂ ಸಮಾಜ ಸೇವೆಯ ಬಗ್ಗೆ ಮಾತನಾಡಿದರು. ಸಂಘವು (2018) ಸುಮಾರು 8 ವರ್ಷಗಳ ಹಿಂದೆ ಪ್ರಾರಂಭಗೊಂಡು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದು, ಆಸಕ್ತ ಕುಟುಂಬಗಳಿಗೆ ದಾನ ಸಹಾಯವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಕಾರ್ಯಕ್ರಮ, ಅಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಅಧ್ಯಕ್ಷರು ತಿಳಿಸಿದರು.

ಕಾರ್ಯಕ್ರಮವು ನಂದನ್ ಕುಮಾರ್ ಪ್ರಾರ್ಥಿಸಿ, ಸುದರ್ಶನ್ ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಪುರುಷೋತ್ತಮ್ ನಿರ್ವಹಿಸಿದರು. ಸಂಜೀವ ದೇವರಗುಡ್ಡೆ ಧನ್ಯವಾದವನ್ನಿತ್ತರು. ಸಂಘದ ಲೋಗೋವನ್ನು ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ ಅಳದಂಗಡಿ ಮಾಡಿದರು.

Related posts

ಬೆಳ್ತಂಗಡಿ ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್& ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya

ಮಣ್ಣಿನ ಸಂಸ್ಕೃತಿ, ತುಳು ಜನಪದ ಸೊಗಡಿನೊಂದಿಗೆ ಅಭ್ಯಾಸ್ ಕಾಲೇಜಿನಲ್ಲಿ ಕೆಸರ್ದಕಲ ಸಂಭ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಬೆಳ್ತಂಗಡಿ: ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್.ಐ.ಟಿ ನೋಟಿಸ್

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಾ| ವೀಣಾ ಬನ್ನಂಜೆ ರವರಿಂದ ನಾಲ್ಕನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ

Suddi Udaya

ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡದ ಉದ್ಘಾಟನೆ

Suddi Udaya
error: Content is protected !!