ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಸೆ.೯ರಂದು ಸಂಘದ ವಠಾರದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಂಘವು ಪ್ರಸಕ್ತ ಸಾಲಿನಲ್ಲಿ ೩೧೯.೨೦ ಕೋಟಿ ವ್ಯವಹಾರ ನಡೆಸಿ, ರೂ. ೨೭ ಕೋಟಿ ಠೇವಣಿ ಇರಿಸಿ, ರೂ.೧.೧೦ ಕೋಟಿ ಲಾಭಗಳಿಸಿ ಸಂಘದ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಘೋಷಣೆ ಮಾಡಿದರು.

ಸಾಧಕರಿಗೆ ಸನ್ಮಾನ -ಗೌರವ
ಶೈಕ್ಷಣಿಕ ಕ್ಷೇತ್ರ ಸಾಧಕರಾದ ಯಶ್ವಿನಿ ಅಜಿರ, ದಿಶಾ ಬಿ.ಆರ್, ತೃಪ್ತಿ ಕೆ. ಹಾಗೂ ಯೋಗ ಸಾಧಕ ವಿಕಾಸ್ ಅವರನ್ನು ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಂಬಳ ಓಟಗಾರ ಚರಣ್ ಪೂಜಾರಿ ಪುತ್ತಿಲ ಹಾಗೂ ಹೈನುಗಾರಿಕೆಗೆ ಕ್ಷೇತ್ರದಲ್ಲಿ ಸಾಧಕ ಚಂದ್ರಶೇಖರ್ ಗೌಡ ಅವರನ್ನು ಸನ್ಮಾನಿಸಲಾಯಿತು. ಕೃಷಿ ಸಾಧಕರಾದ ಕಮಲ ಅಜಿಲ, ಮೋನಪ್ಪ ಗೌಡ ಮನಿಲ, ಸೂರ್ಯನಾರಾಯಣ ಕುದ್ದಣ್ಣಾಯ, ಪಿ.ಕೆ..ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿವೃತ್ತ ಕಾವಲುಗಾರ ಹಿರಿಯರಾದ ಶೇಖಬ್ಬ ಬ್ಯಾರಿ ಅವರನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಸ್ಪರ್ಶ ನವೋದಯ ಸ್ವಸಹಾಯ ಸಂಘವನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ಗೌಡ, ನಿರ್ದೇಶಕರಾದ ಪ್ರಸನ್ನ ಗೌಡ ಎನ್, ಪ್ರಶಾಂತ್ ಪೈ, ಚಂದ್ರಶೇಖರ್, ಹರ್ಷಿತ್ ಪೂಜಾರಿ, ಸವಿತಾ, ಹೇಮಾವತಿ, ಸುರೇಶ್ ಸುಣ್ಣಾಜೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಅರುಣ್ ಬಂಗೇರ ಹಾಗೂ ವಸಂತ ಗೌಡ ಉಪಸ್ಥಿತರಿದ್ದರು. ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಸಹಿತ ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕರಾದ ಪ್ರವೀಣ್ ರೈ ಪಿ, ಶಿವರಾಮ ಕೆಳಗಿನಂಗಡಿ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮೋಹನ್ ಗೌಡ ವಂದಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ವಾರ್ಷಿಕ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು.












