September 6, 2026
ಅಪರಾಧ ಸುದ್ದಿ

ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲು: ಶವ ಪತ್ತೆ

ಮೊಗ್ರು: ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26 ರಂದು ಸಂಜೆ ನಡೆದಿದ್ದು, ಮೃತದೇಹ ಇಂದು ಪತ್ತೆಯಾಗಿದೆ. ನೀರು ಪಾಲಾದ ಯುವಕ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ಧನ ಗೌಡ (42) ಎಂದು

ತಿಳಿದುಬಂದಿದೆ. ಜನಾರ್ಧನ ಹಾಗೂ ಬೋಲೋಡಿ ನಿವಾಸಿ ಮಹೇಶ್ ಎಂಬವರು ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಈ ವೇಳೆ ಜನಾರ್ಧನ ಅವರು ನೀರು ಪಾಲಾಗಿದ್ದಾರೆ . ಆದರೆ ಜೊತೆಗಿದ್ದ ಈತನ ಸ್ನೇಹಿತ ಮಹೇಶ್ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ. ನೀರಿಗೆ ಬಿದ್ದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ. ನೀರು ಪಾಲಾದ ಯುವಕನ ಕೈ ಕಾಲುಗಳು ಗಾಯಗಳಾಗಿದ್ದು, ಸಾವಿನ ಸುತ್ತ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರಿಂದ ಲಭ್ಯವಾಗಬೇಕಾಗಿದೆ.

Related posts

ಬೆಳಾಲು : ಅನೈತಿಕ ಸಂಬಂಧದಿಂದ ಪತ್ನಿಯನ್ನು ಬಾವಿಗೆ ತಳ್ಳಿದ ಪತಿ: ಧರ್ಮಸ್ಥಳ ಪೊಲೀಸರ ಲಾಠಿ ರುಚಿಗೆ ಸತ್ಯಾಂಶ ಬಯಲು

Suddi Udaya

ನಿಡ್ಲೆ ಆನಂದ ವೇಲ್ನೇಸ್ ರೆಸಾಟ್೯ನ ಮಹಡಿಯಿಂದ ಬಿದ್ದು ನಿಡ್ಲೆಯ ಯುವಕ ಮನೀಶ್ ಮೃತ್ಯು

Suddi Udaya

ಗುರುವಾಯನಕೆರೆ: ಮುಸ್ತಾಕ್ ಅನುಮಾನಸ್ಪದ ಸಾವು ಪ್ರಕರಣ: ಜೊತೆಯಲ್ಲಿದ್ದ ಕಾಶಿಪಟ್ಣದ ಇಬ್ರಾಹಿಂ ಲತೀಫ್ ಬಂಧನ

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಧರ್ಮಸ್ಥಳ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ ಧರ್ಮಸ್ಥಳ ಪೊಲೀಸರಿಂದ ಓರ್ವನ ಬಂಧನ

Suddi Udaya
error: Content is protected !!