ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya

ಬೆಳ್ತಂಗಡಿ: ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಇದರ ವತಿಯಿಂದ ಇತ್ತೀಚಿಗೆ ತೀವ್ರ ಮೆದುಳಿನ ರಕ್ತಸ್ರಾವದಿಂದ ಅಕಾಲಿಕ ಮರಣ ಹೊಂದಿದ ಬಿರುವೆರ್ ಕುಡ್ಲದ ಅಭಿಮಾನಿಯಾದ ನವೀನ್ ಕುಮಾರ್ ಗೌಡ ಇವರ ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕಾಗಿ ಘಟಕದ ಬ್ರಹ್ಮಶ್ರೀ ಸೇವಾನಿಧಿಯಿಂದ 45ನೇ ಸೇವಾ ಯೋಜನೆಯನ್ನು ನವೀನ್ ಇವರ ಸಹೋದರ ಪ್ರವೀಣ್ ಇವರಿಗೆ ರೂ. 2೦ ಸಾವಿರ ಚೆಕ್‌ನ್ನು ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯಧರ್ಶಿ ಅರುಣ್ ಪೂಜಾರಿ ಕುಕ್ಕಾವು, ವಲಯ ಸಂಚಾಲಕರಾದ ಸುರೇಂದ್ರ ಕೋಟ್ಯಾನ್, ಸುಧೀರ್ ಪೆರ್ಲ, ಸಂತೋಷ್ ಪೂಜಾರಿ, ಹರೀಶ್ ಪೂಜಾರಿ ಉಪಸ್ಥಿತರಿದ್ದರು

Leave a Comment

error: Content is protected !!