22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಬೆಳಾಲು ಪ್ರೌಢಶಾಲೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ

ಬೆಳಾಲು:ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಇನ್ಫೋಮೆಟ್ ಫೌಂಡೇಶನ್ ಮಂಗಳೂರು ಇವರಿಂದ, ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಸಿದ್ಧತೆ ವಿಷಯದಲ್ಲಿ ತರಬೇತು ಕಾರ್ಯಾಗಾರ ಜರಗಿತು.

ತರಬೇತುದಾರರಾದ ಮಂಗಳೂರಿನ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು,ಆಪ್ತ ಸಲಹೆಗಾರರು ಆಗಿರುವ ಅಬ್ದುಲ್ ಖಾದರ್ ಮತ್ತು ಬೆಂಗಳೂರಿನ ಐಟಿ ಉದ್ಯೋಗಿ ಮಹಮ್ಮದ್ ತೌಸಿಫ್ ರವರು ತರಬೇತಿಯನ್ನು ನಡೆಸಿಕೊಟ್ಟರು.

ತರಬೇತುದಾರರಾದ ಮಹಮ್ಮದ್ ತೌಸಿಫ್ ಮಾತನಾಡಿ” ದುಡಿಮೆ ಯಶಸ್ಸಿನ ಮೂಲಮಂತ್ರ. ವಿದ್ಯಾರ್ಥಿಗಳು ಕನಸು ಕಾಣಬೇಕು, ನನಸಾಗುವಂತೆ ಯೋಜನಾಬದ್ಧವಾಗಿ ಪರಿಶ್ರಮಪಡಬೇಕು. ಜತೆಗೆ ಸಕಾರಾತ್ಮಕ ಮನೋಭಾವ, ಸ್ವೀಕಾರಶೀಲ ಸ್ವಭಾವ, ದುರಾಭ್ಯಾಸ ರಹಿತ ಜೀವನದ ಸಂಕಲ್ಪವಿರುವವರು ಯಶಸ್ವೀ ಸಾಧಕರಾಗಬಹುದು” ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುರಿ ನಿರ್ಧಾರ, ಆತ್ಮವಿಶ್ವಾಸ, ಅಧ್ಯಯನ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಸಂಚಾಲಕ ಉಮೇಶ್ ಮಂಜೊತ್ತು ವಂದಿಸಿದರು. ಹಿರಿಯ ಶಿಕ್ಷಕಿ ವಾರಿಜಾ ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರು, ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Related posts

ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆಯ ಹಿನ್ನಲೆ: ಜು.7 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಂಘಟಿತ ಶ್ರಮದಿಂದ ಕಾಂಗ್ರೆಸ್ ಗೆಲುವು: ಸಂದೀಪ್ ಎಸ್ ನೀರಲ್ಕೆ

Suddi Udaya

ಅರಸಿನಮಕ್ಕಿ: ಪುರೋಹಿತ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ

Suddi Udaya

ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಕಕ್ಕಿಂಜೆ: ಕಾರೊಂದರ ಮೇಲೆ ಕಾಡಾನೆ ದಾಳಿ

Suddi Udaya

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya
error: Content is protected !!