ಜೆ ಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 18 ರಂದು SSLC ವಿದ್ಯಾರ್ಥಿಗಳಿಗೆ ಭಯಮುಕ್ತ ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಈ ತರಬೇತಿ ಕಾರ್ಯಾಗಾರವನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಎಂಪವರಿಂಗ್ ಯೂಥ್ಸ್ ನಿರ್ದೇಶಕ ಯುವ ವಾಗ್ಮಿ ಜೆಸಿ ಸ್ಮಿತೇಶ್ ಎಸ್ ಬ
ಬಾರ್ಯ ನಡೆಸಿಕೊಟ್ಟರು.


ಈ ಕಾರ್ಯಾಗಾರದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷೀನಾರಾಯಣ ಕೆ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಜೆಸಿಐನ ವಲಯಧಿಕಾರಿ ಸ್ವರೂಪ್ ಶೇಖರ್ ಇವರ ಪ್ರಯೋಜಕತ್ವದಲ್ಲಿ ಜೆಸಿ ಸ್ಮಿತೇಶ್ ಎಸ್ ಬಾರ್ಯ ಬರೆದಿರುವ ದೀವಿಗೆ ಎಂಬ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಹಶೀಕ್ಷಕಿ ಶ್ರೀಮತಿ ರೇಷ್ಮಾ ಕಾರ್ಯಕ್ರಮ ಸಂಯೋಜಿಸಿದರು

Leave a Comment

error: Content is protected !!