ದ.ಕ ಜಿಲ್ಲಾ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ಹಾಗೂ ತನಿಖಾ ಸಿಬ್ಬಂದಿಗಳಿಗೆ ವೈಜ್ಞಾನಿಕ ತನಿಖೆ ಪ್ರಾಥಮಿಕ ಹಂತದ ತರಬೇತಿ ಕಾರ್ಯಾಗಾರ

Suddi Udaya

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ಹಾಗೂ ತನಿಖಾ ಸಿಬ್ಬಂದಿಗಳಿಗೆ ವೈಜ್ಞಾನಿಕ ತನಿಖೆ (Scientific Investigation)ಗೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತರಬೇತಿ ಕಾರ್ಯಾಗಾರವು ಜಿಲ್ಲಾ ಪೊಲೀಸ್

ವರಿಷ್ಠಾಧಿಕಾರಿಗಳಾದ ಡಾ. ಅಮಟೆ ವಿಕ್ರಮ್ ಐ.ಪಿ.ಎಸ್ ರವರ ಉಪಸ್ಥಿಯಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಫೆ. 06 ರಂದು ನಡೆಯಿತು.

ಕಾರ್ಯಾಗಾರವನ್ನು ಡಾ. ಪ್ರದೀಪ್ ಕುಮಾರ್ ಜಂಟಿ ನಿರ್ದೇಶಕರು FSL ಬೆಂಗಳೂರು, ಡಾ.ರವೀಂದ್ರ ನಿವೃತ್ತ ಉಪ ನಿರ್ದೇಶಕರು,FSL ಬೆಂಗಳೂರು ಮತ್ತು ಡಾ. ಕಸ್ತೂರಿ ಒಡೆಯರ್ ವೈಜ್ಞಾನಿಕ ಅಧಿಕಾರಿ RFSL ಮಂಗಳೂರು ರವರುಗಳು ನಡೆಸಿಕೊಟ್ಟರು. ಕಾರ್ಯಗಾರದಲ್ಲಿ ಸದರಿ ತರಬೇತಿಯ ಮುಂದಿನ ಹಂತದ ಪ್ರಾಯೋಗಿಕ ತರಬೇತಿಯು ಮುಂದಿನ ದಿನಗಳಲಿ ನಡೆಯಲಿದೆ.

Leave a Comment

error: Content is protected !!