ಬಳಂಜ:ಕಾರಣಿಕದ ಬೊಳ್ಳಜ್ಜ ಧ್ವನಿ ಸುರುಳಿ ಬಿಡುಗಡೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಬಳಂಜ ಇದರ ನಿರ್ಮಾಣದಲ್ಲಿ ಬೊಳ್ಳಾಜೆಯಲ್ಲಿ ನೆಲೆ ನಿಂತ ಕಾರಣಿಕ ಬೊಳ್ಳಾಜ್ಜನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಬಳಂಜ ಬಿಲ್ಲವ ಸಂಘದ ಶ್ರೀ ಗುರು ಪೂಜೋತ್ಸವ ಕಾರ್ಯಕ್ರಮದಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಅವರು ಬಿಡುಗಡೆಗೊಳಿಸಿ ಶುಭ ಕೋರಿದರು.

ಪಂಚ ಶ್ರೀ ಮಹಿಳಾ ಭಜನಾ ಮಂಡಳಿಯ ಸದಸ್ಯರು ಅಭಿನಯಿಸಿದರು.
ಬಳಂಜ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಪುಷ್ಪಾ ಗೀರೀಶ್ ಹಾಡಿ ಅಭಿನಯಿಸಿದ್ದಾರೆ.ಸಾಹಿತ್ಯ ಹಾಗೂ ಅಭಿನಯದಲ್ಲಿ ಬಳಂಜ ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ವಿಶಾಲ ಜಗದೀಶ್,ನಿರ್ದೇಶನ ನಿರಂಜನ್ ಗೌಡ ಜಿ.ಕೆರೆ,ಸಹಗಾಯನ ಮತ್ತು ಅಭಿನಯ ಅಮಿತಾ ಪುರಂದರ, ಅನುಷಾ ಬೊಕ್ಕಸ, ಛಾಯಾಗ್ರಾಹಕ ಪ್ರಣವ್ ರಾವ್,
ಮಿಕ್ಸಿಂಗ್ ಸಂತೋಷ್ ಪುಚ್ಚೆರ್ ಹಾಗೂ ಪಂಚ ಶ್ರೀ ಮಹಿಳಾ ಭಜನಾ ಮಂಡಳಿ ಹಾಗೂ ಬಳಂಜ ಮಹಿಳಾ ಬಿಲ್ಲವ ವೇದಿಕೆಯ ಸಹಕಾರವಿತ್ತು.

ಕಾರ್ಯಕ್ರಮದಲ್ಲಿ ಪೋಲೀಸ್ ಅಧಿಕಾರಿ ಕುಮಾರ್ ಚಂದ್ರ,ಹಿರಿಯರಾದ ಕೆ.ವಸಂತ ಸಾಲಿಯಾನ್, ಹೆಚ್.ಧರ್ಣಪ್ಪ ಪೂಜಾರಿ, ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Comment

error: Content is protected !!