ಸಾರ್ವಜನಿಕರಿಗೆ ಉಚಿತ ರಕ್ತದೂತ್ತಡ ಹಾಗೂ ಮಧುಮೇಹ ತಪಾಸಣೆ

Suddi Udaya

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ “ಶ್ರೀ ಮಂಜುನಾಥ ” ದಳದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಧಾನದ ಜಾತ್ರಾ ಮಹೋತ್ಸವದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ , ಹಾಗೂ ಇಂಡಿಯನ್ ರೆಡ್ ಕ್ರಾಸ್ ನ ಜೂನಿಯರ್ ರೆಡ್ ಕ್ರಾಸ್ ವಿಧ್ಯಾರ್ಧಿಗಳು ಸಾರ್ವಜನಿಕರಿಗೆ ಉಚಿತವಾಗಿ ರಕ್ತದೂತ್ತಡ ಹಾಗೂ ಮದುಮೇಹ ತಪಾಸಣೆಯನ್ನು ಮಾಡಿದರು .ಹಾಗೇ ಶ್ರೀ ಮಂಜುನಾಥ ಭಜನಾ ತಂಡದ ವಿಧ್ಯಾರ್ಧಿಗಳು ಕುಣಿತ ಭಜನೆಯನ್ನು ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಭಾರತ್ ಸ್ಕೌಟ್ ಗೈಡ್ ನ ಕಾರ್ಯದರ್ಶಿ, ಇಂಡಿಯನ್ ಜೂನಿಯರ್ ರೆಡ್ ಕ್ರಾಸ್ ನ ಜೂನಿಯರ್ ಕೌನ್ಸಿಲರ್, ಶ್ರೀ ಮಂಜುನಾಥ ಭಜನಾ ತಂಡದ ಭಜನಾ ಸಂಯೋಜಕರಾದ ಶ್ರೀಮತಿ ಪ್ರಮೀಳಾರವರ ನೇತೃತ್ವದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.

Leave a Comment

error: Content is protected !!