ಬಿ ಎಂ ಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿ ಯೋಜನೆ

Suddi Udaya

ಬೆಳ್ತಂಗಡಿ:ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮ ನಿಧಿಯನ್ನು ಉಜಿರೆಯ ಉದ್ಯಮಿ ,ಲಕ್ಷ್ಮೀ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರು ಪೆ.3ರಂದು ಉದ್ಘಾಟಿಸಿ ಚಾಲನೆ ನೀಡಿದರು

. ಮತ್ತು ಅವರು ಉಪಸ್ಥಿತರಿದ್ದ ರಿಕ್ಷಾ ಚಾಲಕರನ್ನು ಉದ್ದೇಶಿಸಿ ತಾನು ರಿಕ್ಷಾ ಚಾಲಕರ ಸಂಕಷ್ಟಕ್ಕೆ ಸದಾ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಎಂಎಸ್ ಹಿರಿಯ ನಾಯಕರು ವಿಶ್ವನಾಥ ಶೆಟ್ಟಿ ಅವರು ರಿಕ್ಷಾ ಚಾಲಕರು ತಮ್ಮ ‌ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಹಾಗೂ ಕ್ಷೇಮ ನಿಧಿಯ ಯೋಜನೆಯನ್ನು ಉತ್ತಮ ಕಾರ್ಯಗತಗೊಳಿಸಲು ಪ್ರಯತ್ನಿಸುವಂತೆ ವಿನಂತಿಸಿದರು.ಕಟ್ಟಡ ಕಾರ್ಮಿಕರ ಮಂಡಳಿಯಂತೆ ರಿಕ್ಷಾ ಚಾಲಕರ ಶ್ರೇಯೋಬಿವ್ರದ್ದಿಗೆ ಮಂಡಳಿಯನ್ನು ರಚಿಸುವಂತೆ ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಸರಕಾರವನ್ನು ಅನೇಕ ಭಾರಿ ಒತ್ತಾಯಿಸಿದೆ.ಈ ಹೋರಾಟಕ್ಕೆ ಬಲ ಬರಬೇಕಾದರೆ ರಿಕ್ಷಾ ಚಾಲಕರು ಸಂಘಟಿತರಾಗಬೇಕಾಗುವುದು ಅವಶ್ಯಕ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು. ವಹಿಸಿದ್ದರು

ಬಿಎಂಎಸ್ ರಾಜ್ಯ ಕಾರ್ಯದರ್ಶಿ ಶ್ರೀ ಜಯರಾಜ್ ಸಾಲಿಯಾನ್ ,.ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ ಅದ್ಯಕ್ಷರಾದ ಉದಯ ಬಿ.ಕೆ.
ಬಿಎಂಎಸ್ ರಿಕ್ಷಾ ಚಾಲಕ ಸಂಘ ಬೆಳ್ತಂಗಡಿ ಗೌರವ ಸಲಹೆಗಾರರು ರಿಕ್ಷಾ ಸಂಘಟನೆಯ ಮುಂಖಡರಾದ ಉಮೇಶ್ ಅತ್ತಾಜೆ ಹಾಗೂ ಅದ್ಯಕ್ಷರಾದ ಕ್ರಷ್ಣ ಬೆಳಾಲು ,ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರಡ್ಕ,ಪ್ರಶಾಂತ ಗರ್ಡಾಡಿ,ಲವಕುಮಾರ್ ಕಾರ್ಯಕ್ರಮವನ್ನು ಬಿಎಂಎಸ್ ತಾಲೂಕು ಸಂಯೋಜಕ ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ನಿರೂಪಿಸಿ,ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕುದ್ರಡ್ಕ ಸ್ವಾಗತಿಸಿ ಪ್ರಶಾಂತ ಗರ್ಡಾಡಿ ವಂದಿಸಿದರು

Leave a Comment

error: Content is protected !!